(ವಿಡಿಯೋ)ಮುಸ್ಲಿಂ ಹುಡುಗಿ ಜೊತೆ ಓಡಿ ಹೋದ ದಲಿತ ಯುವಕ: ತಂದೆ, ತಮ್ಮನನ್ನು ಮರಕ್ಕೆ ಕಟ್ಟಿ ಥಳಿತ

Published : Jun 28, 2017, 12:53 PM ISTUpdated : Apr 11, 2018, 12:35 PM IST
(ವಿಡಿಯೋ)ಮುಸ್ಲಿಂ ಹುಡುಗಿ ಜೊತೆ ಓಡಿ ಹೋದ ದಲಿತ ಯುವಕ: ತಂದೆ, ತಮ್ಮನನ್ನು ಮರಕ್ಕೆ ಕಟ್ಟಿ ಥಳಿತ

ಸಾರಾಂಶ

ಹಿರಿಯ ಮಗನೊಬ್ಬ ಮುಸ್ಲಿಂ ಯುವತಿಯೊಂದಿಗೆ ಓಡಿ ಹೋಗಿದ್ದ  ಕಾರಣ, ಆತನ ತಂದೆ ಹಾಗೂ ತಮ್ಮನನ್ನು ಮರಕ್ಕೆ ಕಟ್ಟಿ ಹಾಕಿ, ಮನ ಬಂದಂತೆ ಥಳಿಸಿರುವ ಅಮಾನುಷ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ(ಜೂ.28): ಹಿರಿಯ ಮಗನೊಬ್ಬ ಮುಸ್ಲಿಂ ಯುವತಿಯೊಂದಿಗೆ ಓಡಿ ಹೋಗಿದ್ದ  ಕಾರಣ, ಆತನ ತಂದೆ ಹಾಗೂ ತಮ್ಮನನ್ನು ಮರಕ್ಕೆ ಕಟ್ಟಿ ಹಾಕಿ, ಮನ ಬಂದಂತೆ ಥಳಿಸಿರುವ ಅಮಾನುಷ ಘಟನೆ ವಿಜಯಪುರದಲ್ಲಿ ನಡೆದಿದೆ.

ಜಿಲ್ಲೆಯ ಸಿಂದಗಿ ತಾಲೂಕಿನ ಹಾಳಗುಂಡಕನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮರಿಯಪ್ಪ ಎಂಬುವವರ ಪುತ್ರ ನಿಂಗಪ್ಪ ಹರಿಜನ ಎಂಬಾತ ಅದೇ ಗ್ರಾಮದ ಮಾಬುಸಾಬ್ ಎಂಬುವವರ ಪುತ್ರಿ ಮಾಶಾಬಿ ಅನ್ನೋಳ ಜೊತೆ ಪರಾರಿಯಾಗಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಾಬುಸಾಬ್​ ಹಾಗೂ ಆತನ ಅಣ್ಣ  ಅಲ್ಲಾಭಕ್ಷ ಸೇರಿದಂತೆ ಒಟ್ಟು 7 ಜನರ ತಂಡ ಮರಿಯಪ್ಪ ಹಾಗೂ ಆತನ ಚಿಕ್ಕ ಮಗ ರಮೇಶನನ್ನು ಗ್ರಾಮದ ಆಲದ ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ.

ಈ ಅಮಾನವೀಯ ಘಟನೆ ಊರಿನ ನಡು ಬೀದಿಯಲ್ಲೇ ನಡೆಯುತ್ತಿದ್ದರೂ ಸಹ, ಯಾರೊಬ್ಬರೂ ಬಿಡಿಸದೇ ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತ ದೃಶ್ಯಮೊಬೈಲ್​ನಲ್ಲಿ ಸೆರೆಯಾಗಿದೆ. ಇನ್ನು ಹಲ್ಲೆಯಿಂದ ಮರಿಯಪ್ಪನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ವಿಜಯಪುರ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌
‘ನರೇಗಾ’ ಬದಲಾವಣೆ ವಿರುದ್ಧ ಹೋರಾಟ, ಇದು ಐತಿಹಾಸಿಕ ಪ್ರಮಾದ: ಸಚಿನ್‌ ಪೈಲಟ್