
ಪಣಜಿ[ಆ.09]: ಮುಹಮದ್ ಆಲಿ ಜಿನ್ನಾರನ್ನು ಭಾರತದ ಪ್ರಥಮ ಪ್ರಧಾನಿಯಾಗಿಸಲು ಮಹಾತ್ಮ ಗಾಂಧಿಯ ವರಿಗೆ ಇಷ್ಟವಿತ್ತಾದರೂ, ಜವಾಹರಲಾಲ್ ನೆಹರೂ ರವರಿಗೆ ಇಷ್ಟವಿರಲಿಲ್ಲ ಎಂದು ಟಿಬೆಟಿಗರ ಧಾರ್ಮಿಕ ಗುರು ದಲೈ ಲಾಮಾ ಹೇಳಿದ್ದಾರೆ.
ಗೋವಾದ ಸಂಖಲಿಮ್ ನಗರದಲ್ಲಿ ಗೋವಾ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಈ
ವಿಷಯ ತಿಳಿಸಿದರು. ‘ಕೆಲವೇ ಜನರು ನಿರ್ಧಾರ ಕೈಗೊಳ್ಳುವಂತಹ ಅಪಾಯಕಾರಿ ವ್ಯವಸ್ಥೆಯಾದ ಊಳಿಗ ಮಾನ್ಯ ಪದ್ಧತಿಗಿಂತ ಪ್ರಜಾಪ್ರಭುತ್ವ ವ್ಯವಸ್ಥೆ ತುಂಬಾ ಉತ್ತಮವಾದುದು. ಈಗ ಭಾರತದ ವಿಷಯವೇ ತೆಗೆದುಕೊಳ್ಳಿ, ಜಿನ್ನಾರನ್ನು ಪ್ರಧಾನಿ ಮಾಡುವುದಕ್ಕೆ ಮಹಾತ್ಮಾ ಗಾಂಧೀಜಿಗೆ ತುಂಬಾ ಇಷ್ಟವಿತ್ತು. ಆದರೆ ಪಂಡಿತ್ ನೆಹರೂ ಇದಕ್ಕೆ ನಿರಾಕರಿಸಿದರು.
ತಾವು ಪ್ರಧಾನಿಯಾಗ ಬೇಕು ಎಂಬ ಸ್ವಯಂ ಕೇಂದ್ರಿತ ಗುಣ ನೆಹರೂ ಅವರಿಗಿತ್ತು ಎಂಬುದು ನನ್ನ ಅಭಿಪ್ರಾಯ. ಮಹಾತ್ಮಾ ಗಾಂಧೀಜಿಯವರ ಇಚ್ಛೆ ಈಡೇರಿದ್ದರೆ, ಭಾರತ ಮತ್ತು ಪಾಕಿಸ್ತಾನ ಒಂದೇ ಆಗಿರುತಿತ್ತು’ ಎಂದು ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಅವರು ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.