ಸುಳ್ವಾಡಿ ವಿಷ ಪ್ರಕರಣ: ಪ್ರಸಾದದಲ್ಲಿತ್ತು ಮಾರಾಣಾಂತಿಕ ಕೀಟನಾಶಕ

By Web DeskFirst Published Dec 17, 2018, 3:46 PM IST
Highlights

ಚಾಮರಾಜನಗರದ ಕಿಚ್ಚುಗುತ್ತಿ ಮಾರಮ್ಮ ದೇಗುಲದ ಪ್ರಸಾದದಲ್ಲಿ ವಿಷಾಂಶ ಬೆರೆಸಿರುವುದು ಖಚಿತವಾಗಿದೆ. ವಿಧಿ ವಿಜ್ಞಾನ ನೀಡಿದ ವರದಿಯಲ್ಲಿ ಕೀಟನಾಶಕ ಅಂಶ ಇರುವುದು ಬಹಿರಂಗವಾಗಿದೆ. 

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕು ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿರುವುದು ಖಚಿತವಾಗಿದೆ. ಪ್ರಸಾದ ಸೇವಿಸಿ 14 ಮಂದಿ ಮೃತಪಟ್ಟಿದ್ದಾರೆ.  60ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ. 

"

ಮಾರಾಮ್ಮ ದೇವಾಲಯದ ಪ್ರಸಾದವನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದು, ಇಲ್ಲಿಂದ ಬಂದ ವರದಿಯಲ್ಲಿ ಪ್ರಸಾದದಲ್ಲಿ ಕೀಟನಾಶಕ ಬೆರೆಸಿರುವುದು ಬಹಿರಂಗವಾಗಿದೆ.

ಪ್ರಸಾದದಲ್ಲಿ ಮೋನೋ ಕ್ರೋಟೋಫಾಸ್ ಪ್ರಾಸ್ಪರಸ್ ಇನ್ಸೆಕ್ಟೀಸೈಡ್ ವಿಷಕಾರಿ ಅಂಶ ಪತ್ತೆಯಾಗಿದ್ದು, ಇದು ತರಕಾರಿ ಬೆಳೆಗಳ ಕೀಟನಾಶಕವಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತು ಎಸ್.ಪಿ ಧರ್ಮೇಂದ್ರ ಕುಮಾರ್ ಮೀನಾ ಮಾಹಿತಿ ನೀಡಿ ಪ್ರಸಾದದಲ್ಲಿ ಕೀಟನಾಶಕ ಬೆರೆಸಿರುವುದು ಪರೀಕ್ಷೆ ಪತ್ತೆಯಾಗಿದ್ದಾಗಿ ಖಚಿತಪಡಿಸಿದ್ದಾರೆ.

ವಿಷ ಪ್ರಸಾದ: ಇಬ್ಬರು ಸ್ವಾಮೀಜಿಗಳ ವಿಚಾರಣೆಏರುತ್ತಿರುವ ಸಾವಿನ ಸಂಖ್ಯೆಗೆ ಕಾರಣವೇನು..?
click me!