
ಚೆನ್ನೈ(ಆ.16): ಸ್ವಾತಂತ್ರ್ಯ ದಿನದಂದು ಚರಂಡಿಗೆ ಬಿದ್ದಿದ್ದ ನವಜಾತ ಶಿಶುವನ್ನು ತಮಿಳುನಾಡಿನ ಚೆನ್ನೈನಲ್ಲಿ ರಕ್ಷಿಸಲಾಗಿದೆ. ತಮಿಳುನಾಡಿನ 45 ವರ್ಷದ ವಲಸಾರವಕ್ಕಂ ಎಂಬ ಮಹಿಳೆ ಈ ಮಗುವನ್ನು ಬಚಾವ್ ಮಾಡಿದ್ದು, ಮಗುವನ್ನು ರಕ್ಷಣೆ ಮಾಡಿರುವ ವಿಡಿಯೋ ಭಾರೀ ವೈರಲ್ ಆಗಿದೆ.
ಸ್ವಾತಂತ್ರ್ಯ ದಿನದಂದೇ ಸಿಕ್ಕ ಮಗುವಿಗೆ ಸುದಾನ್ಥಿರಂ ಅಥವಾ ಸ್ವಾತಂತ್ರ್ಯ ಎಂದು ಹೆಸರಿಡಲಾಗಿದೆ. ಮಗು ಅಳುತ್ತಿದ್ದ ಶಬ್ದ ಕೇಳಿ ಮಹಿಳೆ ಗಂಡು ಶಿಶುವನ್ನ ಚರಂಡಿಯಿಂದ ಎತ್ತಿಕೊಂಡು ರಕ್ಷಣೆ ಮಾಡಿದ್ದಾರೆ. ಸದ್ಯ, ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅದನ್ನು ಅನಾಥಾಶ್ರಮಕ್ಕೆ ಸೇರಿಸಲಾಗುವುದೆಂದು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಈ ಮಗು ಯಾರದ್ದು, ಅದನ್ನು ಚರಂಡಿಗೆ ಯಾಕೆ ಎಸೆದು ಹೋಗಿದ್ದಾರೆ ಎಂಬುದರ ಕುರಿತು ಇನ್ನಷ್ಟೇ ತನಿಖೆ ಮಾಡಬೇಕಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.