
ತುಮಕೂರು(ಡಿ.23): ಎರಡು ಕುಟುಂಬಗಳ ನಡುವಿನ ಜಮೀನು ವಿವಾದ ಶವಸಂಸ್ಕಾರಕ್ಕೆ ಅಡ್ಡಿಯಾದ ಘಟನೆ ತುಮಕೂರಿನಲ್ಲಿ ನಡೆದಿದೆ. ವಿವಾದಿತ ಜಮೀನಿನಲ್ಲಿ ಶವ ಸಂಸ್ಕಾರ ಮಾಡಲಾಗದೆ ಕಳೆದ 3 ದಿನದಿಂದ ಮನೆ ಮುಂದೆ ಶವ ಇಟ್ಟು ಕುಳಿತಿದ್ದಾರೆ ಸಂಬಂಧಿಕರು.
ಮಾಚನಳ್ಳಿಯ ನಿವಾಸಿ ಚಿಕ್ಕಹನುಮಯ್ಯ ಡಿಸೆಂಬರ್ 21ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಇದೇ ಊರಿನ ರಂಗಸ್ವಾಮಯ್ಯ ಹಾಗೂ ಮೃತ ವ್ಯಕ್ತಿಯ ಕುಟುಂಬದ ನಡುವೆ ಜಮೀನು ವಿವಾದ ಇತ್ತು. ಆ ವಿವಾದಿತ ಜಮೀನಲ್ಲೇ ಶವಸಂಸ್ಕಾರಕ್ಕೆ ಸಿದ್ಧತೆ ಕೂಡಾ ಮಾಡಲಾಗಿತ್ತು. ಆದ್ರೆ ಇದಕ್ಕೆ ರಂಗಸ್ವಾಮಯ್ಯ ವಿರೋಧ ಒಡ್ಡಿದ್ದಾರೆ. ಪರಿಣಾಮ ಅಂತ್ಯಸಂಸ್ಕಾರ ಮಾಡದೆ ಶವವನ್ನು ಮನೆಮುಂದೆಯೇ ಇಟ್ಟು ಸಂಬಂಧಿಕರು ರೋಧಿಸುವಂತಾಗಿದೆ.
ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಆಗಮಿಸಿ ಜಮೀನು ದಾಖಲೆ ಪರಿಶೀಲಿಸಿದ್ದಾರೆ. ಆದರೆ ಜಮೀನಿನ ದಾಖಲೆಗಳೆಲ್ಲವೂ ರಂಗಸ್ವಾಮಿ ಹೆಸರಲ್ಲಿ ಇರುವುದರಿಂದ ಪೊಲೀಸರೂ ಕೂಡಾ ಕೈಚೆಲ್ಲಿದ್ದಾರೆ. ಇತ್ತ ಮೃತನ ಸಂಬಂಧಿಕರು ಕಳೆದ ಮೂರು ದಿನಗಳಿಂದ ಶವದ ಮುಂದೆ ಕುಳಿತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.