ಗೋಮೂತ್ರದಿಂದ ಕ್ಯಾನ್ಸರ್ ಮಾಯ: ರಿಸರ್ಚ್!

Published : Jul 03, 2018, 05:00 PM IST
ಗೋಮೂತ್ರದಿಂದ ಕ್ಯಾನ್ಸರ್ ಮಾಯ: ರಿಸರ್ಚ್!

ಸಾರಾಂಶ

ಗೋಮೂತ್ರದಿಂದ ಕ್ಯಾನ್ಸರ್ ಮಾಯ ಸಾಮಾನ್ಯ ಕ್ಯಾನ್ಸರ್ ಗೆ ಗೋಮೂತ್ರ ರಾಮಬಾಣ ಜುನಾಗಡ್ ಕೃಷಿ ವಿಶ್ವವಿದ್ಯಾಲಯ ಸಂಶೋಧನೆ

ಅಹಮದಾಬಾದ್(ಜು.3): ಮಾರಕ ಕ್ಯಾನ್ಸರ್ ರೋಗಕ್ಕೆ ಗೋಮೂತ್ರ ಮದ್ದಾಗಬಲ್ಲದು ಎಂದು ಜುನಾಗಡ್ ಕೃಷಿ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಜ್ಞಾನಿಗಳು ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜುನಾಗಡ್ ಕೃಷಿ ವಿವಿ ಸಂಶೋಧನಾ ತಂಡ, ಗೋಮೂತ್ರ ಕ್ಯಾನ್ಸರ್ ರೋಗ ಗುಣಮುಖಕ್ಕೆ ಸಹಾಯ ಮಾಡಬಲ್ಲದು ಎಂದು ಹೇಳಿದ್ದಾರೆ.  ಬಾಯಿಯ ಕ್ಯಾನ್ಸರ್, ಲಂಗ್ಸ್ ಕ್ಯಾನ್ಸರ್ ಮುಂತಾದ ಸಾಮಾನ್ಯ ಕ್ಯಾನ್ಸರ್ ರೋಗಕ್ಕೆ ಗೋಮೂತ್ರ ರಾಮಬಾಣ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮಾತನಾಡಿರುವ ಸಂಶೋಧನಾ ತಂಡದ ಮುಖ್ಯಸ್ಥೆ ಶ್ರದ್ಧಾ ಭಟ್, ನಿರಂತರ ಒಂದು ವರ್ಷದಿಂದ ಸಂಶೋಧನೆ ನಡೆಸಿ ಕ್ಯಾನ್ಸರ್ ಗೆ ಗೋಮೂತ್ರ ಮದ್ದು ಎಂಬುದನ್ನು ಕಂಡುಹಿಡಿದಿದ್ದಾಗಿ ತಿಳಿಸಿದ್ದಾರೆ.  ಬಾಟಲ್ ನಲ್ಲಿ ಸಂಗ್ರಹಿಸಿಟ್ಟ ಕ್ಯಾನ್ಸರ್ ಸೆಲ್ ಗಳ ಮೇಲೆ ಅದೇ ಪ್ರಮಾಣದ ಗೋಮೂತ್ರ ಪರೀಕ್ಷೆ ಮಾಡಿದಾಗ ಧನಾತ್ಮಕ ಪರಿಣಾಮ ಬಂದಿದೆ ಎಂದು ಸಂಶೋಧನೆ ತಿಳಿಸಿದೆ.

ಮುಂದಿನ ಹಂತದಲ್ಲಿ ಇಲಿಗಳ ಮೇಲೆ ಈ ಪ್ರಯೋಗ ಮಾಡಿ ಅದು ಯಶಸ್ವಿಯಾದರೆ, ಗೋಮೂತ್ರ ಒಳಗೊಂಡ ಮಾತ್ರೆಗಳನ್ನು ತಯಾರಿಸುವುದಾಗಿ ಸಂಶೋಧನ ತಂಡ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ