ಶಾಕಿಂಗ್ ನ್ಯೂಸ್ : ನಾವು ತಿನ್ನುತ್ತಿರುವ ಸೊಪ್ಪು,ತರಕಾರಿ ವಿಷಪೂರಿತ !

Published : Apr 21, 2017, 04:58 AM ISTUpdated : Apr 11, 2018, 12:42 PM IST
ಶಾಕಿಂಗ್ ನ್ಯೂಸ್ : ನಾವು ತಿನ್ನುತ್ತಿರುವ ಸೊಪ್ಪು,ತರಕಾರಿ ವಿಷಪೂರಿತ !

ಸಾರಾಂಶ

ಇಷ್ಟು ದಿನ ನಾವು ಆಹಾರದ ಕಲಬೆರಕೆ ಕಂಡಿದ್ದೇವೆ. ಆ ಮೂಲಕ ಆಹಾರಕ್ಕೆ ವಿಷ ಸೇರಿಸೋದನ್ನ ನೋಡಿದ್ದೇವೆ. ಆದರೆ ಇದಕ್ಕಿಂತಲೂ ಆತಂಕಕಕಾರಿ ಹಾಗೂ ಅಪಾಯಕಾರಿ ಬೆಳವಣಿಗೆಯೊಂದು ಬೆಂಗಳೂರು ಸುತ್ತಮುತ್ತ ನಡೆಯುತ್ತಿದೆ. ರಾಜಧಾನಿಯ ಎಲ್ಲಾ ಕೆರೆ, ನದಿ, ತೊರೆಗಳು ವಿಷಮಯವಾಗಿದೆ. ಇದೇ ವಿಷ ನೀರಲ್ಲಿ ರೈತ ಬೆಳೆ ಬೆಳೆಯುತ್ತಿದ್ದಾನೆ. ಆ ಬೆಳೆ ತಿಂದ ನಮಗೆ ಮಾರಣಾಂತಿಕ ಕಾಯಿಲೆಗಳು ಬರುತ್ತಿವೆ.

ಬೆಂಗಳೂರಿಗರಿಗೊಂದು ಶಾಕಿಂಗ್​ ನ್ಯೂಸ್​. ರಾಜಧಾನಿ ಮಂದಿ ತಿನ್ನುತ್ತಿರೋ ಸೊಪ್ಪು, ತರಕಾರಿ ಸೇಫಲ್ಲ. ಕುಡಿತಿರೋ ಹಾಲು ಹಾಲಲ್ಲ ವಿಷ. ಅದು ಹೇಗೆ ಅನ್ನೋದನ್ನ ನಮ್ಮ ಕವರ್​ಸ್ಟೋರಿ ತಂಡ ಸಾಕ್ಷಿ ಸಮೇತವಾಗಿ ಪತ್ತೆ ಹಚ್ಚಿದೆ.

ಇಷ್ಟು ದಿನ ನಾವು ಆಹಾರದ ಕಲಬೆರಕೆ ಕಂಡಿದ್ದೇವೆ. ಆ ಮೂಲಕ ಆಹಾರಕ್ಕೆ ವಿಷ ಸೇರಿಸೋದನ್ನ ನೋಡಿದ್ದೇವೆ. ಆದರೆ ಇದಕ್ಕಿಂತಲೂ ಆತಂಕಕಕಾರಿ ಹಾಗೂ ಅಪಾಯಕಾರಿ ಬೆಳವಣಿಗೆಯೊಂದು ಬೆಂಗಳೂರು ಸುತ್ತಮುತ್ತ ನಡೆಯುತ್ತಿದೆ. ರಾಜಧಾನಿಯ ಎಲ್ಲಾ ಕೆರೆ, ನದಿ, ತೊರೆಗಳು ವಿಷಮಯವಾಗಿದೆ. ಇದೇ ವಿಷ ನೀರಲ್ಲಿ ರೈತ ಬೆಳೆ ಬೆಳೆಯುತ್ತಿದ್ದಾನೆ. ಆ ಬೆಳೆ ತಿಂದ ನಮಗೆ ಮಾರಣಾಂತಿಕ ಕಾಯಿಲೆಗಳು ಬರುತ್ತಿವೆ.

ಅಷ್ಟು ಮಾತ್ರವಲ್ಲ ತ್ಯಾಜ್ಯ ನೀರಿನಿಂದ ಬೆಳೆಯೋ ಸೊಪ್ಪು ತರಕಾರಿ ತಿಂದ್ರೆ ಮೈಯಲ್ಲಿ ಹುಳ ಸೇರೋ ಕಾಯಿಲೆಯೂ ಕಾಡಬಹುದು. ವರ್ತೂರು ಕೆರೆ, ಪಿನಾಕಿನಿ ನದಿ ಸುತ್ತ ಕಣ್ಣು ಹಾಯಿಸಿದ್ರೆ ಬರೀ ಕೊಳಕು ನೀರಿನ ಕೃಷಿಯೇ ಕಾಣಿಸಿತು. ಈ ನೀರಿನಲ್ಲಿ ಬೆಳದ ಬೆಳೆ ಮಾರುಕಟ್ಟೆಗೆ ಬಂದು ನಮ್ಮ ಮನೆಗಳ ಅಡುಗೆ ಮನೆ ಸೇರುತ್ತಿದೆ.

ರಾಜಧಾನಿಯ ಸುತ್ತಮುತ್ತಲು ಸಾವಿರಾರು ಎಕರೆ ಭೂಮಿಯಲ್ಲಿ ಇದೇ ಅಪಾಯಕಾರಿ ರಾಸಾಯನಿಕಯುಕ್ತ ನೀರಿನಿಂದ ಕೃಷಿ ಮಾಡ್ತಿದ್ದಾರೆ. ಇಲ್ಲೇ ಬೆಳೆದಿರೋ ಹುಲ್ಲು ನೀರನ್ನು ದನಕರುಗಳು ಸೇವಿಸುತ್ತಿವೆ. ಇದು ನಮ್ಮ ಆಹಾರವನ್ನೇ ವಿಷಮಯವಾಗಿಸಿದೆ. ಇಂಥಾ ಅಪಾಯಕಾರಿ ಬೆಳವಣಿಗೆ ನಡೆಯುತ್ತಿದ್ರೂ ನಮ್ಮ ಸರ್ಕಾರ ಕ್ಯಾರೇ ಅನ್ನುತ್ತಿಲ್ಲ. ವಾಯು ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ ಸತ್ತೇ ಹೋಗಿರೋದ್ರಿಂದ ಇವತ್ತು ನಮ್ಮ ಅನ್ನದ ಬಟ್ಟಲು ವಿಷಮಯವಾಗಿದೆ.

ವರದಿರಂಜಿತ್​ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?