ನನ್ನನ್ನು ಎನ್’ಕೌಂಟರ್’ನಲ್ಲಿ ಮುಗಿಸಲು ಪೊಲೀಸರಿಂದ ಪ್ಲಾನ್: ಜಿಗ್ನೇಶ್ ಮೆವಾನಿ

Published : Feb 24, 2018, 01:06 PM ISTUpdated : Apr 11, 2018, 01:07 PM IST
ನನ್ನನ್ನು ಎನ್’ಕೌಂಟರ್’ನಲ್ಲಿ ಮುಗಿಸಲು ಪೊಲೀಸರಿಂದ ಪ್ಲಾನ್: ಜಿಗ್ನೇಶ್ ಮೆವಾನಿ

ಸಾರಾಂಶ

ಪೊಲೀಸ್ ಅಧಿಕಾರಿಗಳ ವಾಟ್ಸಪ್ ಸಂಭಾಷಣೆ ವೈರಲ್ ಕೊಲ್ಲಲು ಆದೇಶ ಬಂದಿರುವುದು ಗಾಂಧಿನಗರದಿಂದಲೋ? ದೆಹಲಿಯಿಂದಲೋ?: ಜಿಗ್ನೇಶ್

ಅಹಮದಾಬಾದ್: ಪೊಲೀಸ್ ಅಧಿಕಾರಿಗಳ ವಾಟ್ಸಪ್ ಸಂಭಾಷಣೆ ವೈರಲ್ ಆಗಿರುವ ಬೆನ್ನಲ್ಲೇ  ಗುಜರಾತ್ ಶಾಸಕ ಹಾಗೂ ದಲಿತ ಯುವನಾಯಕ ಜಿಗ್ನೆಶ್ ಮೆವಾನಿ ತಮ್ಮ ಜೀವಕ್ಕೆ ಅಪಾಯವಿದೆಯೆಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಸದಸ್ಯರಾಗಿರುವ ‘ADR Police & MEDIA’ ಎಂಬ ವಾಟ್ಸಪ್ ಗ್ರೂಪ್’ನಲ್ಲಿ ಡಿವೈಎಸ್’ಪಿ ಯೊಬ್ಬರು, ರಾಜಕಾರಣಿಯನ್ನು ಪೊಲೀಸರು ಥಳಿಸುವ ಹಾಗೂ ಪೊಲೀಸ್ ಎನ್’ಕೌಂಟರ್’ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಾತನಾಡುವ ವಿಡಿಯೋ ಕ್ಲಿಪ್ ಹಾಕಿದ್ದಾರೆ. ಬಳಿಕ,  ಪೊಲೀಸರ ‘ಅಪ್ಪ’ನಾಗಲು ಹೊರಟಿರುವವರಿಗೆ ಇದೇ ಗತಿ, ಇದನ್ನು ನೆನಪಿನಲ್ಲಿಟ್ಟುಕೊಳ್ಳಿ- ಗುಜರಾತ್ ಪೊಲೀಸ್, ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಮೈಲಿ ಇಮೋಜಿ ಹಾಕುವ ಮೂಲಕ ಪ್ರತಿಕ್ರಯಿಸಿದ್ದಾರೆ. ಆ ಸಂಭಾಷಣೆಯು ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದ್ದು ಅದಕ್ಕೆ ಜಿಗ್ನೇಶ್ ಮೆವಾನಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ನನ್ನನ್ನು ಮುಗಿಸುವ ಬಗ್ಗೆ ಪೊಲೀಸರು ಚರ್ಚೆ ನಡೆಸುತ್ತಿದ್ದಾರೆ, ನನನ್ನು ಎನ್’ಕೌಂಟರ್’ನಲ್ಲಿ ಕೊಲ್ಲಲು ಆದೇಶ ಬಂದಿರುವುದು ಗಾಂಧಿನಗರದಿಂದಲೋ? ದೆಹಲಿಯಿಂದಲೋ ಎಂದು ಕೇಳಿದ್ದಾರೆ. ಇದು ಗಂಬೀರ ವಿಚಾರ, ಈ ಬಗ್ಗೆ ಗೃಹ ಕಾರ್ಯದರ್ಶಿ ಮತ್ತು ಡಿಜಿಪಿಗೆ ದೂರು ನೀಡುವುದಾಗಿ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್