ನಕ್ಸಲ್‌ ಕೂಂಬಿಂಗ್‌ ವೇಳೆ ಕುಸಿದು ಪೇದೆ ಸಾವು

Published : Jun 17, 2018, 10:37 AM ISTUpdated : Jun 17, 2018, 10:39 AM IST
ನಕ್ಸಲ್‌ ಕೂಂಬಿಂಗ್‌ ವೇಳೆ ಕುಸಿದು ಪೇದೆ ಸಾವು

ಸಾರಾಂಶ

ಶಂಕಿತ ನಕ್ಸಲರು ಪ್ರತ್ಯಕ್ಷವಾಗಿರುವ ಮಡಪ್ಪಾಡಿಯ ಅರಣ್ಯದಲ್ಲಿ ಶನಿವಾರ ಮಧ್ಯಾಹ್ನ ಕೂಂಬಿಂಗ್‌ ಕಾರ್ಯಾಚರಣೆಯ ವೇಳೆ ನಕ್ಸಲ್‌ ನಿಗ್ರಹ ಪಡೆಯ ಪೊಲೀಸರೊಬ್ಬರು ಹೃದಯಾಘಾತದಿಂದ ಮೃತಪಟ್ಟಘಟನೆ ನಡೆದಿದೆ. 

ಸುಳ್ಯ: ಶಂಕಿತ ನಕ್ಸಲರು ಪ್ರತ್ಯಕ್ಷವಾಗಿರುವ ಮಡಪ್ಪಾಡಿಯ ಅರಣ್ಯದಲ್ಲಿ ಶನಿವಾರ ಮಧ್ಯಾಹ್ನ ಕೂಂಬಿಂಗ್‌ ಕಾರ್ಯಾಚರಣೆಯ ವೇಳೆ ನಕ್ಸಲ್‌ ನಿಗ್ರಹ ಪಡೆಯ ಪೊಲೀಸರೊಬ್ಬರು ಹೃದಯಾಘಾತದಿಂದ ಮೃತಪಟ್ಟಘಟನೆ ನಡೆದಿದೆ. ಎಎನ್‌ಎಫ್‌ ಕಾರ್ಕಳ ಕ್ಯಾಂಪ್‌ನ ಪೊಲೀಸ್‌ ಸಿಬ್ಬಂದಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ನಿವಾಸಿ ರಂಗಸ್ವಾಮಿ (48) ಮೃತಪಟ್ಟವರು.

ಶನಿವಾರ ಬೆಳಗ್ಗೆ ಎಎನ್‌ಎಫ್‌ ತಂಡವೊಂದು ಮಡಪ್ಪಾಡಿಯಿಂದ ಕಡ್ಯ ಮಾರ್ಗವಾಗಿ ಅರಣ್ಯದೊಳಗೆ ತೆರಳಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸುತ್ತಿತ್ತು. ಮಧ್ಯಾಹ್ನ ಈ ತಂಡ ಕಠಿಣವಾದ ಏರುಹಾದಿಯಲ್ಲಿ ತೆರಳುತ್ತಿತ್ತು. ಮಳೆ ಸಹ ಸುರಿಯುತ್ತಿತ್ತು. ಈ ವೇಳೆ ರಂಗಸ್ವಾಮಿ ಅವರಿಗೆ ಮುಂದೆ ನಡೆಯಲಾಗದೆ ಬಸವಳಿದು ಕುಸಿದು ಬಿದ್ದು ಮೃತಪಟ್ಟರೆಂದು ಮೂಲಗಳು ತಿಳಿಸಿವೆ.

ಕಡ್ಯದಿಂದ ಕೋಟೆಗುಡ್ಡೆಯವರೆಗೆ ಐದು ಕಿ.ಮೀ. ದುರ್ಗಮ ರಸ್ತೆ ಇದ್ದು, ಜೀಪ್‌ ಮಾತ್ರ ಸಂಚರಿಸಬಹುದಾಗಿದೆ. ಅಲ್ಲಿಂದ ಮೂರು ಕಿ.ಮೀ. ದೂರದ ಕಾಡೊಳಗೆ ಈ ಘಟನೆ ನಡೆದಿದೆ. ದುರ್ಗಮ ಕಾಡಿನಿಂದ ಮೃತದೇಹವನ್ನು ತರಲು ಹರಸಾಹಸ ಪಟ್ಟರು. ರಂಗಸ್ವಾಮಿ ಅವರು ನಕ್ಸಲ್‌ ನಿಗ್ರಹ ಪಡೆಗೆ ಬರುವ ಮೊದಲು ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಯ ಎಸ್‌ಟಿಎಫ್‌ನಲ್ಲೂ ಕಾರ್ಯ ನಿರ್ವಹಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಲ್ಲಿಕಾರ್ಜುನ ಖರ್ಗೆ ಹಠಾವೋ ಪ್ರಿಯಾಂಕಾ ಗಾಂಧಿ ಲಾವೋ, ಕಾಂಗ್ರೆಸ್ ಅಧ್ಯಕ್ಷ ಬದಲಾವಣೆಗೆ ಹೋರಾಟ
ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ