ಪಿಎಸ್ಐ ಸಂತೋಷ ಪಾಟೀಲ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಚಾಲಕನನ್ನು ಬಂಧಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವೇರಿ(ಸೆ.30): ಎಟಿಎಂಗೆ ಹಣವನ್ನೇ ಲಪಟಾಯಿಸಿ ಪರಾರಿಯಾಗಲು ಯತ್ನಿಸಿದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ನಾರಾಯಣ್ ಬಾಬನ್ ಕೊಡೆಕರ್ ಬಂಧಿತ ಚಾಲಕ. ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಬಳಿ ಸೆಕ್ಯೂರಿಟಿ ವ್ಯಾಲ್ಯೂ ಕಂಪನಿಗೆ ಸೇರಿದ ವಾಹನದಲ್ಲಿ ಮಹಾರಾಷ್ಟ್ರದ ಹಡಪ್ಸರ್ ಬ್ಯಾಂಕಿಗೆ ಸೇರಿದ ಸುಮಾರು 5 ಕೋಟಿ ಹಣವನ್ನು ಬಾಬನ್ ಪುಣೆಯಿಂದ ಲಪಟಾಯಿಸಿ ಬೆಂಗಳೂರಿಗೆ ತೆರಳುತ್ತಿದ್ದ.
ಪಿಎಸ್ಐ ಸಂತೋಷ ಪಾಟೀಲ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಚಾಲಕನನ್ನು ಬಂಧಿಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.