ಮರಳು ತರಲಿಲ್ಲವೆಂದು ಚಾಲಕನಿಗೆ ಥಳಿಸಿದನಾ ಪೇದೆ?

Published : Oct 03, 2016, 04:43 AM ISTUpdated : Apr 11, 2018, 12:51 PM IST
ಮರಳು ತರಲಿಲ್ಲವೆಂದು ಚಾಲಕನಿಗೆ ಥಳಿಸಿದನಾ ಪೇದೆ?

ಸಾರಾಂಶ

ತುಮಕೂರು(ಅ.03): ತುಮಕೂರಿನ ಶಿರಾ ಗೇಟಿನಲ್ಲಿರುವ ಎಸ್ ಸಿ, ಎಸ್ ಟಿ ಘಟಕದಲ್ಲಿ ಸೇವೆ ಸಲ್ಲಿಸುತಿದ್ದ ಪೊಲೀಸ್ ಪೇದೆ ನಾರಾಯಣ ಮೂರ್ತಿ ವಿರುದ್ಧ ಟ್ರಾಕ್ಟರ್ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಯಲ್ಲಾಪುರದ ನಿವಾಸಿ ಟ್ರಾಕ್ಟರ್ ಚಾಲಕ ನಾಗರಾಜು ಎಂಬವರು ಆಪಾದನೆ ಮಾಡಿದ್ದಾರೆ.

ಪೊಲೀಸ್ ಪೇದೆ ನಾರಾಯಣ ಮೂರ್ತಿ ಮನೆ ಕಟ್ಟುತ್ತಿದ್ದು ಮರಳು ತರುವಂತೆ ನಾಗರಾಜುವಿಗೆ ಆರ್ಡರ್ ಮಾಡಿದ್ದನಂತೆ. ಪೊಲೀಸರು  ಅಡ್ಡಿಪಡಿಸಿದ್ದರೆ ತನ್ನ ಹೆಸರು ಹೇಳು ಅಂತ ನಾರಾಯಣ ಮೂರ್ತಿ ನಾಗರಾಜುವಿಗೆ ತಾಕೀತು ಮಾಡಿ 5 ಸಾವಿರ ರೂ ಮುಂಗಡವಾಗಿ ನೀಡಿದ್ದರಂತೆ. ಆದರೆ ಕೊರಟಗೆರೆಯಲ್ಲಿ ಪೊಲೀಸರು ನಾಗರಾಜುವಿನ ಮರಳು ಟ್ರಾಕ್ಟರ್ ಹಿಡಿದು ಜಪ್ತಿ ಮಾಡಿ ದಂಡ ಹಾಕಿದ್ದರು. ಆಗ ಪೇದೆ ನಾಗರಾಜುವಿಗೆ ಪೋನ್ ಮಾಡಿದ್ದರೆ  ಟ್ರಾಕ್ಟರ್ ಬಿಡಿಸಿ ಕೊಡಲು ತನ್ನಿಂದ ಸಾಧ್ಯವಿಲ್ಲ ಅಂತ ಕೈ ಕೊಟ್ಟಿದ್ದಾನೆ.

ಇದರಿಂದ ನಾಗರಾಜುವಿನ ಟ್ರಾಕ್ಟರ್ ಪೊಲೀಸ್ ಠಾಣೆಯಲ್ಲಿ ಇರವಂತಾಯಿತು. ಕಡೆಗೆ ಸಿಟ್ಟಿಗೆದ್ದ ಪೇದೆ ನಾರಾಯಣ ಮೂರ್ತಿ ಮರಳು ತಾರದೇ ಇದ್ದುದಕ್ಕೆ ನನ್ನ ಮೇಲೆ ಮನಸೋ ಇಚ್ಚೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದಾರೆ ಅಂತ ಡ್ರೈವರ್​​ ನಾಗರಾಜು ಆರೋಪಿಸಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಂಗ್ಲಾದೇಶದಲ್ಲಿ ಅನಾಮಿಕನ ಕೈಚಳಕ, ಒಸ್ಮಾನ್ ಹದಿ ಬೆನ್ನಲ್ಲೇ ಮತ್ತೊಬ್ಬ ನಾಯಕನಿಗೆ ಗುಂಡೇಟು
ದುಬೈನ ಬುರ್ಜ್ ಖಲೀಫಾಗೆ ಬಡಿದ ಸಿಡಿಲು: ವೀಡಿಯೋ ವೈರಲ್