ವಿಶ್ವನಾಥ್​ರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಶತಪ್ರಯತ್ನ

Published : May 05, 2017, 07:19 AM ISTUpdated : Apr 11, 2018, 01:06 PM IST
ವಿಶ್ವನಾಥ್​ರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಶತಪ್ರಯತ್ನ

ಸಾರಾಂಶ

ರೀಗಳ ಸೂಚನೆ ಮೇರೆಗೆ ವಿಶ್ವನಾಥ್​’ರನ್ನ ಕಾಂಗ್ರೆಸ್​​’ನಲ್ಲೇ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಶತಪ್ರಯತ್ನ  ಮಾಡಿದ್ದಾರೆ. ಅಲ್ಲದೇ ಸಿಎಂ ಸೂಚನೆ ಮೇರೆಗೆ ಇಬ್ಬರು ಶಾಸಕರಾದ ಹೆಚ್.ಎಂ.ರೇವಣ್ಣ ಹಾಗೂ ವರ್ತೂರು ಪ್ರಕಾಶ್​ರನ್ನು ಸಂಧಾನಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೆ ಹೋಗಿದ್ದಾರೆ.

ಬೆಂಗಳೂರು (ಮೇ. 05): ಕಾಂಗ್ರೆಸ್ ಪಕ್ಷದಿಂದ ಇತ್ತೀಚಿನ ಬೆಳವಣಿಗೆಯಿಂದ ಬೇಸತ್ತು ಜೆಡಿಎಸ್​’ನತ್ತ ಮುಖ ಮಾಡಿರೋ ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್​ರನ್ನು ಕಾಂಗ್ರೆಸ್’​ನಲ್ಲೇ ಉಳಿಸಿಕೊಳ್ಳಲು ಶತಪ್ರಯತ್ನ ನಡೆಯುತ್ತಿದೆ.

ಎಚ್​.ವಿಶ್ವನಾಥ್​​ರನ್ನು ಕಾಂಗ್ರೆಸ್ ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಗಿನೆಲೆ ಮಠದ ಶ್ರೀಗಳ ಮಧ್ಯಸ್ಥಿಕೆ ವಹಿಸಿದ್ದು, ಕಾಂಗ್ರೆಸ್​ನಲ್ಲಿ ವಿಶ್ವನಾಥ್ ಮೂಲೆಗುಂಪಾಗೋದು ಬೇಡ ಎಂದು ಕಾಗಿನೆಲೆ ಮಠದ ಶ್ರೀಗಳು ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದರು.

ಶ್ರೀಗಳ ಸೂಚನೆ ಮೇರೆಗೆ ವಿಶ್ವನಾಥ್​’ರನ್ನ ಕಾಂಗ್ರೆಸ್​​’ನಲ್ಲೇ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಶತಪ್ರಯತ್ನ  ಮಾಡಿದ್ದಾರೆ. ಅಲ್ಲದೇ ಸಿಎಂ ಸೂಚನೆ ಮೇರೆಗೆ ಇಬ್ಬರು ಶಾಸಕರಾದ ಹೆಚ್.ಎಂ.ರೇವಣ್ಣ ಹಾಗೂ ವರ್ತೂರು ಪ್ರಕಾಶ್​ರನ್ನು ಸಂಧಾನಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೆ ಹೋಗಿದ್ದಾರೆ.

ಈಗಾಗಲೇ ಮೈಸೂರಿಗೆ ತಲುಪಿದ ಇಬ್ಬರು ಶಾಸಕರು ವಿಶ್ವನಾಥ್​ರನ್ನು ಭೇಟಿ ಮಾಡಿದ್ದು ಚರ್ಚೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ
ಪ್ರವಾಸಿಗರ ಸ್ವರ್ಗ.. ಅಸ್ಸಾಂ ರಾಜ್ಯ ಯಾವುದಕ್ಕೆ ಪ್ರಸಿದ್ಧ ನಿಮಗೆ ಗೊತ್ತೇ?