
ನವದೆಹಲಿ (ಜ.09): ಸಂಜಯ್ ಮತ್ತು ಮೇನಕಾ ಗಾಂಧಿ ಪುತ್ರ ಉತ್ತರ ಪ್ರದೇಶದ ಬಿಜೆಪಿ ಸಂಸದ ವರುಣ ಗಾಂಧಿಯನ್ನು ಕಾಂಗ್ರೆಸ್ನತ್ತ ಸೆಳೆಯಲು ರಾಹುಲ್ ಮತ್ತು ಪ್ರಿಯಾಂಕಾ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಸುದ್ದಿ ಯೂಥ್ ಕಾಂಗ್ರೆಸ್ ವಲಯದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗೆ ಪುನಶ್ಚೇತನ ನೀಡಲು ವರುಣ್ ಗಾಂಧಿ ಬರಬೇಕು ಎಂಬ ಪ್ರಯತ್ನ ನಡೆಯುತ್ತಿದೆಯಂತೆ. ಆದರೆ ಇಲ್ಲಿಯವರೆಗೆ ಪತ್ರಕರ್ತರು ಎಷ್ಟೇ ಕೇಳಿದರು ವರುಣ್ ಅಂತಹ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಪ್ರಿಯಾಂಕಾ ಮತ್ತು ವರುಣ್ ನಡುವೆ ಸಂಬಂಧ ಚೆನ್ನಾಗಿದೆಯಾದರೂ ಸೋನಿಯಾ ಮತ್ತು ಮೇನಕಾ ನಡುವೆ ಮಾತುಕತೆ ನಿಂತುಹೋಗಿ ದಶಕಗಳೇ ಕಳೆದಿವೆ. ಇಂದಿರಾ ಗಾಂಧಿ ಜೀವಂತವಿದ್ದಾಗಲೇ ರಾತ್ರೋರಾತ್ರಿ ಮನೆ ಬಿಟ್ಟು ಹೋಗಿದ್ದ ಮೇನಕಾ ಗಾಂಧಿ, ನಂತರ ನಡೆಸಿದ್ದು ಕಾಂಗ್ರೆಸ್ ವಿರೋಧಿ ರಾಜಕಾರಣವೇ. ಆದರೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೊತೆಗೆ ವರುಣ್ ಗಾಂಧಿ ಸಂಬಂಧ ಅಷ್ಟಕಷ್ಟೇ. ಆ ಕಾರಣದಿಂದ ವರುಣ್'ರನ್ನು ಪಕ್ಷಕ್ಕೆ ಕರೆದುಕೊಂಡು ಬನ್ನಿ ಎಂದು ಕೆಲ ಉತ್ತರ ಪ್ರದೇಶದ ನಾಯಕರು ಸಲಹೆ ನೀಡುತ್ತಿದ್ದಾರೆ. ಆದರೆ ಗಾಂಧಿ ಪರಿವಾರದಲ್ಲಿ ಇನ್ನೊಬ್ಬ ಗಾಂಧಿಯನ್ನು ಹಾಗೆ ಒಳಗೆ ಕರೆದುಕೊಂಡು ಬಂದು ನಿಭಾಯಿಸುವುದು ಕಷ್ಟದ ಕೆಲಸ ಬಿಡಿ.
ಇಂಡಿಯಾ ಗೇಟ್ ನ ಆಯ್ದ ಭಾಗಗಳು, ಪ್ರಶಾಂತ್ ನಾತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.