ರಾಜಕಾಲುವೆಗೆ ಬಿದ್ದು ಮೂರು ವರ್ಷದ ಮಗು ಸಾವು

Published : Jan 09, 2018, 02:03 PM ISTUpdated : Apr 11, 2018, 12:39 PM IST
ರಾಜಕಾಲುವೆಗೆ ಬಿದ್ದು ಮೂರು ವರ್ಷದ ಮಗು ಸಾವು

ಸಾರಾಂಶ

ರಾಜಕಾಲುವೆಗೆ ಪುಟ್ಟ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ದೊಡ್ಡಬೊಮ್ಮಸಂದ್ರ ಬಳಿಯ ವಿದ್ಯಾರಣ್ಯಪುರದಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾರೆ ಕೆಲಸಕ್ಕೆಂದು ಕಲುಬುರಗಿಯಿಂದ ಬಂದಿದ್ದ ಕುಟುಂಬದ ಮೂರು ವರ್ಷದ ತಲುಶ್ರೀ ಎಂಬ ಮಗು ಸಾವನ್ನಪ್ಪಿದೆ.

ಬೆಂಗಳೂರು (ಜ.09): ರಾಜಕಾಲುವೆಗೆ ಪುಟ್ಟ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ದೊಡ್ಡಬೊಮ್ಮಸಂದ್ರ ಬಳಿಯ ವಿದ್ಯಾರಣ್ಯಪುರದಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾರೆ ಕೆಲಸಕ್ಕೆಂದು ಕಲುಬುರಗಿಯಿಂದ ಬಂದಿದ್ದ ಕುಟುಂಬದ ಮೂರು ವರ್ಷದ ತಲುಶ್ರೀ ಎಂಬ ಮಗು ಸಾವನ್ನಪ್ಪಿದೆ.

ಬೆಳಗ್ಗೆ 9 ಗಂಟೆ ಸುಮಾರಿಗೆ ಆಟವಾಡುತ್ತಿದ್ದ ಮಗು ಕಾಲುವೆಗೆ ಬಿದ್ದಿದೆ. ಮಗು ಬಿದ್ದು ಒಂದು ಗಂಟೆಯಾದರೂ ಕೂಡ ಯಾರೂ ಗಮನಿಸಿರಲಿಲ್ಲ. ನಂತರ ನೋಡುವಾಗ ಮಗು ಮೃತಪಟ್ಟಿದೆ.

ಸುಮಾರು 15 ಕುಟುಂಬಗಳು ಈ ಜಾಗದಲ್ಲಿ ಟೆಂಟ್ ಹಾಕಿಕೊಂಡು ವಾಸವಾಗಿವೆ. ಘಟನಾ ಸ್ಥಳಕ್ಕೆ ಯಲಹಂಕ ಜೋನಲ್ ಇಂಜಿನಿಯರ್ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಜಾಗದಲ್ಲಿ ತಂತಿ ಗೋಡೆಯನ್ನು ಅಳವಡಿಸಲು ಸರ್ವೆ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ಇಂಜಿಯರ್ ಪರಮೇಶ್ವರ್ ಅವರಿಗೆ ಸೂಚನೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

10 ದಿನ ನಡೆದ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ತೆರೆ
ಗ್ಯಾರಂಟಿಯಿಂದಾಗಿ ತಲಾ ಆದಾಯದಲ್ಲಿ ರಾಜ್ಯ ನಂ.1 : ಸಿದ್ದರಾಮಯ್ಯ