ಕಾಂಗ್ರೆಸ್‌ಗೆ ಮೇಜರ್‌ ಸರ್ಜರಿ ಆಗಬೇಕಿದೆ: ಮೊಯ್ಲಿ

Published : Jun 17, 2019, 08:22 AM IST
ಕಾಂಗ್ರೆಸ್‌ಗೆ ಮೇಜರ್‌ ಸರ್ಜರಿ ಆಗಬೇಕಿದೆ: ಮೊಯ್ಲಿ

ಸಾರಾಂಶ

ಕಾಂಗ್ರೆಸ್‌ಗೆ ಮೇಜರ್‌ ಸರ್ಜರಿ ಆಗಬೇಕಿದೆ| ಪಕ್ಷದ ಎಲ್ಲಾ ಹಂತವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ರಾಹುಲ್‌ ಗಾಂಧಿ ಅವರಲ್ಲಿದೆ- ಮೊಯ್ಲಿ

ನವದೆಹಲಿ[ಜೂ.17]: ‘ಕಾಂಗ್ರೆಸ್‌ಗೆ ಮಹತ್ವದ ಸರ್ಜರಿಯೊಂದು ಆಗಬೇಕಿದೆ. ಪಕ್ಷದ ಎಲ್ಲಾ ಹಂತವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ರಾಹುಲ್‌ ಗಾಂಧಿ ಅವರಲ್ಲಿದೆ. ಅವರೇ ಖುದ್ದಾಗಿ ಪಕ್ಷ ನಿಯಂತ್ರಿಸುವ ಅಧಿಕಾರವನ್ನು ಹೊಂದಿರಬೇಕು’’ ಎಂದು ಕಾಂಗ್ರೆಸ್‌ನ ಹಿಡಿಯ ಮುಖಂಡ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಆದ ಮುಖಭಂಗದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಾಹುಲ್‌ ಗಾಂಧಿ ಅವರೇ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬೇಕೆಂದು ಪ್ರತಿಪಾದಿಸಿರುವ ವೀರಪ್ಪ ಮೊಯ್ಲಿ ಅವರು, ಕಾಂಗ್ರೆಸ್‌ ರಾಜ್ಯ ಘಟಕಗಳನ್ನು ಮುನ್ನಡೆಸುತ್ತಿರುವ ರೀತಿ ಕೆಟ್ಟದಾಗಿದೆ. ಇದರ ಪರಿಣಾಮ ಪಕ್ಷದ ಮೇಲೆ ಆಗುತ್ತಿದೆ. ಇವೆಲ್ಲವೂ ದಾಖಲಾಗುವ ರೀತಿಯಲ್ಲಿ ಪಕ್ಷವನ್ನು ಬಲವರ್ಧನೆಗೊಳಿಸುವ ಕೆಲಸ ಆಗಬೇಕಿದೆ ಎಂದಿದ್ದಾರೆ.

ಪಕ್ಷದ ಮುಂದಿನ ಅಧ್ಯಕ್ಷರು ಯಾರೆಂದು ಯೋಚಿಸುವ ಸಮಯ ಇದಲ್ಲ. ಇದಕ್ಕಾಗಿ ಸಮಯ ವ್ಯರ್ಥಮಾಡುವುದರಲ್ಲಿ ಅರ್ಥವಿಲ್ಲ. ರಾಜ್ಯಗಳಲ್ಲಿ ಪಕ್ಷ ಮುನ್ನಡೆಸುವ ಸಮರ್ಥ ಅಭ್ಯರ್ಥಿಗಳನ್ನು ಬದಲಾಯಿಸುವಲ್ಲಿ ಅವರು ಗಮನ ಹರಿಸಬೇಕು. ಸಮರ್ಥರನ್ನು ಹುಡುಕಿ ನೇಮಕ ಮಾಡಬೇಕು ಎಂದು ಕಾಂಗ್ರೆಸ್‌ನ ಅನುಭವಿ ಮುಖಂಡ ಮೊಯ್ಲಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್