ಬಿಜೆಪಿ ‘ಸೇರ ಹೊರಟ’ ಕಾಂಗ್ರೆಸ್‌ ಶಾಸಕರನ್ನು ಮಂಗಗಳೆಂದ ಡಿಸಿಎಂ

Published : Jul 09, 2019, 09:51 AM IST
ಬಿಜೆಪಿ ‘ಸೇರ ಹೊರಟ’ ಕಾಂಗ್ರೆಸ್‌ ಶಾಸಕರನ್ನು ಮಂಗಗಳೆಂದ ಡಿಸಿಎಂ

ಸಾರಾಂಶ

ಬಿಜೆಪಿ ‘ಸೇರ ಹೊರಟ’ ಕಾಂಗ್ರೆಸ್‌ ಶಾಸಕರನ್ನು ಮಂಗಗಳೆಂದ ಡಿಸಿಎಂ| ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಗೋವಾಫಾರ್ವಡ್‌ ಪಕ್ಷದ ವಿಜಯ್‌ ಸರ್‌ದೇಸಾಯಿ ವ್ಯಂಗ್ಯ

ಪಣಜಿ[ಜು.09]: ರಾಜ್ಯದ ಕನಿಷ್ಠ 10 ಕಾಂಗ್ರೆಸ್‌ ಶಾಸಕರು, ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂಬ ವರದಿಗಳ ಬಗ್ಗೆ ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಗೋವಾಫಾರ್ವಡ್‌ ಪಕ್ಷದ ವಿಜಯ್‌ ಸರ್‌ದೇಸಾಯಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ನಲ್ಲಿ ಹಲವಾರು ಮಂಗಗಳಿವೆ. ಅವೆಲ್ಲಾ ಅಲ್ಲಿಂದಿಲ್ಲಿಗೆ ಹಾರಲು ಸಿದ್ಧವಾಗಿವೆ. ಆದರೆ ನಾವು ಅವರಿಗೆ ನಮ್ಮ ಮೈತ್ರಿಯಲ್ಲಿ ಜಾಗ ಕಲ್ಪಿಸುವುದಿಲ್ಲ. ಅವರಿಗೆ ಇನ್ನೆಲ್ಲಿ ಬೇಕೋ ಅಲ್ಲಿಗೆ ಹೋಗಲಿ ಎಂದಿದ್ದಾರೆ.

ಇತ್ತೀಚೆಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವಿನಯ್‌ ತೆಂಡುಲ್ಕರ್‌ ಕೂಡಾ ಕಾಂಗ್ರೆಸ್‌ನ 10 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ. ಆದರೆ ನಾವೇ ಅವರಿಗೆ ಅವಕಾಶ ಕೊಟ್ಟಿಲ್ಲ ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಗ್ರೆಸ್‌ ದೆವ್ವದ ಮನೆ, ದಿನಕ್ಕೊಂದು ಬಿಳಿ-ಕರಿ ದೆವ್ವ ಹೊರ ಬರ್ತಿವೆ: ಆರ್.ಅಶೋಕ್ ವ್ಯಂಗ್ಯ
ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ ನಿಯಮ ಶೀಘ್ರ ಜಾರಿ: ಸಚಿವ ಶಿವರಾಜ ತಂಗಡಗಿ