ರಮ್ಯಾ ಸೋಲಿಸಲು ಕಾಂಗ್ರೆಸ್ ನಲ್ಲೇ ಪಿತೂರಿ?

Published : Aug 04, 2018, 11:29 AM IST
ರಮ್ಯಾ ಸೋಲಿಸಲು ಕಾಂಗ್ರೆಸ್ ನಲ್ಲೇ ಪಿತೂರಿ?

ಸಾರಾಂಶ

ಕಳೆದ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣರಾಗಿದ್ದರಾ ಎನ್ನುವ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ. 

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಚಿತ್ರ ನಟಿ ರಮ್ಯಾ ಸೋಲಿಗೆ ಕಾಂಗ್ರೆಸ್‌ನಲ್ಲೇ ಪಿತೂರಿ ನಡೆದಿತ್ತಾ ಎಂಬ ವಿಚಾರದ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು ಇದೀಗ ಜೆಡಿಎಸ್‌ನಲ್ಲಿರುವ ಮಾಜಿ ಶಾಸಕ ಆರ್.ಎಲ್.ಶಿವರಾಮೇಗೌಡ ಅವರ ಹೇಳಿಕೆಯೇ ಈ ಚರ್ಚೆಗೆ ಕಾರಣ. 

ರಮ್ಯಾ ಅವರನ್ನು  ಫ್ಲೈಯಿಂಗ್ ಸ್ಟಾರ್(ಬಣ್ಣದ ಚಿಟ್ಟೆ) ಬಣ್ಣಿಸಿರುವ ಅವರು, ಮೋಹಕ ತಾರೆಯ ಸೋಲಿಗೆ ಕಾಂಗ್ರೆಸ್‌ನಲ್ಲಿದ್ದ ತಾನೇ ಹಾರೈಸಿದ್ದೆ ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ದಂದು ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದನಾ ಸಮಾರಂಭದಲ್ಲಿ ಮಾತನಾಡುವ ವೇಳೆ ಅವರು ಈ ವಿಷಯ ಬಹಿರಂಗ ಪಡಿಸಿದರು. ನಮ್ಮ ಪಕ್ಷದಿಂದ ಫ್ಲೈಯಿಂಗ್ ಸ್ಟಾರ್ ಚುನಾವಣೆಗೆ ನಿಂತಿದ್ರು. ಒಂದು ಲೆಟರ್‌ಗಾಗಿ ಬೆಂಗಳೂರಿಗೆ ಅವರ ಹಿಂದೆ ಸುತ್ತಬೇಕಾಗಿತ್ತು. 

ಈ ಫ್ಲೈಯಿಂಗ್ ಸ್ಟಾರ್ ಕೈಗೆ ಮಂಡ್ಯ ಜಿಲ್ಲೆ ಕೊಡಬಾರದು ಅಂತಾ ನಿರ್ಧಾರ ಮಾಡಿ ಕೆ.ಆರ್.ಎಸ್.ನಲ್ಲಿ ಪಕ್ಷದ ವಿರುದ್ಧ ಸಭೆ ಕರೆದಿದ್ದೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಇದ್ರೂ ನಮ್ಮ ಪಾರ್ಟಿ ಸೋಲಲಿ ಅಂತೇಳಿ ಕಾಂಗ್ರೆಸ್ ಕಣ್ಣಿಗೆ ಗುರಿಯಾದೆ ಎಂದು ಅವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!
ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!