ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಕೈ’ ನಾಯಕರ ಕಿತ್ತಾಟ; ಸಿಎಂ ಎದುರೇ ಕಾಂಗ್ರೆಸ್ ಮುಖಂಡರ ಜಟಾಪಟಿ

Published : Oct 22, 2017, 09:49 PM ISTUpdated : Apr 11, 2018, 12:49 PM IST
ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಕೈ’ ನಾಯಕರ ಕಿತ್ತಾಟ; ಸಿಎಂ ಎದುರೇ ಕಾಂಗ್ರೆಸ್ ಮುಖಂಡರ ಜಟಾಪಟಿ

ಸಾರಾಂಶ

ವಿಶೇಷ ವಿಮಾನದ ಮೂಲಕ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯನವರ ಎದುರೇ ಕರಾವಳಿಯ ಪ್ರಮುಖ ಕೈ ನಾಯಕರಿಬ್ಬರ ಭಿನ್ನಮತ ಸ್ಫೋಟಗೊಂಡಿದೆ.

ಬೆಂಗಳೂರು (ಅ.22): ವಿಶೇಷ ವಿಮಾನದ ಮೂಲಕ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯನವರ ಎದುರೇ ಕರಾವಳಿಯ ಪ್ರಮುಖ ಕೈ ನಾಯಕರಿಬ್ಬರ ಭಿನ್ನಮತ ಸ್ಫೋಟಗೊಂಡಿದೆ.

ವಿಮಾನ ಇಳಿದ ಸಿಎಂ ಪೊಲೀಸ್ ಗೌರವ ಪಡೆದು ಕಾರು ಹತ್ತಲು ಮುಂದಾಗ್ತಾ ಇದ್ದಂತೆ ಸರ್ಕಾರದ ಮುಖ್ಯ ಸಚೇತಕ ಐವಾನ್ ಡಿಸೋಜಾ ಮತ್ತು ಮೂಡಬಿದರೇ ಶಾಸಕ ಅಭಯ ಚಂದ್ರ ಜೈನ್ ಪರಸ್ಪರ ಕಚ್ಚಾಡಿಕೊಂಡಿದ್ದಾರೆ. ಸಿಎಂ ಸ್ವಾಗತಿಸೋಕೆ ನಾ ಮುಂದು, ತಾ ಮುಂದು ಅಂತ ಇಬ್ಬರೂ ಪೈಪೋಟಿಯಲ್ಲಿ ಮುನ್ನುಗ್ಗಿದ್ದಾರೆ. ಈ ವೇಳೆ ಆಕ್ರೋಶಗೊಂಡ ಸಚಿವ ಜೈನ್, ಐವನ್ ಡಿಸೋಜಾರನ್ನ ಕೈಯಿಂದ ತಳ್ಳಿ ಸಿಎಂ ಹತ್ತಿರ ಬರದಂತೆ ತಡೆದಿದ್ದಾರೆ. ಈ ವೇಳೆ ಇಬ್ಬರ ನಡುವೆ ಸಿಎಂ ಎದುರಲ್ಲೇ ಜಟಾಪಟಿ ನಡೆದಿದ್ದು, ಇಬ್ಬರ ಬೆಂಬಲಿಗರು ಕೂಡ ಪರಸ್ಪರ ಕೆಸರೆರಚಾಟ ಕೂಡ ನಡೆಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
'ನಾಯಿ-ನರಿಗಳು ಕರವೇ ಬಗ್ಗೆ ಮಾತಾಡಿದ್ರೆ ಏನ್‌ ಹೇಳೋಕೆ ಆಗುತ್ತೆ..' ಸುದೀಪ್‌ ಭೇಟಿ ಕುರಿತ ವಿವಾದದ ಬಗ್ಗೆ ನಾರಾಯಣ ಗೌಡ ತಿರುಗೇಟು