ಸಿದ್ದರಾಮಯ್ಯ - ಪರಮೇಶ್ವರ್ ನಡುವೆ ತಿಕ್ಕಾ​ಟ

Published : Dec 26, 2018, 11:07 AM IST
ಸಿದ್ದರಾಮಯ್ಯ -  ಪರಮೇಶ್ವರ್ ನಡುವೆ ತಿಕ್ಕಾ​ಟ

ಸಾರಾಂಶ

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಬಣ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಮೇಲೆ ಅಸಮಾಧಾನಗೊಂಡಿದೆ. ಗೃಹ ಖಾತೆ​ ಮತ್ತು ಯುವಜನ ಮತ್ತು ಕ್ರೀಡಾ ಖಾತೆ​ಯನ್ನು ಹೊಂದಿ​ರುವ ಜಿ.ಪರ​ಮೇ​ಶ್ವರ್‌ ಅವ​ರಿಂದ ಪ್ರಮುಖ ಖಾತೆ​ಗ​ಳಾದ ಬೆಂಗ​ಳೂರು ನಗ​ರಾ​ಭಿ​ವೃದ್ಧಿ ಅಥವಾ ಗೃಹ ಖಾತೆ​ಯನ್ನು ಹಿಂಪ​ಡೆ​ಯ​ಬೇಕು ಎಂದು ಒತ್ತಾಯಿಸಿದೆ. 

ಬೆಂಗಳೂರು :  ಖಾತೆ - ಕ್ಯಾತೆಗೆ ಪ್ರಮುಖ ಕಾರಣ ಬೆಂಗ​ಳೂರು ನಗ​ರಾ​ಭಿ​ವೃದ್ಧಿ ಹಾಗೂ ಗೃಹ ಖಾತೆ​ ಮತ್ತು ಯುವಜನ ಮತ್ತು ಕ್ರೀಡಾ ಖಾತೆ​ಯನ್ನು ಹೊಂದಿ​ರುವ ಜಿ.ಪರ​ಮೇ​ಶ್ವರ್‌ ಅವ​ರಿಂದ ಪ್ರಮುಖ ಖಾತೆ​ಗ​ಳಾದ ಬೆಂಗ​ಳೂರು ನಗ​ರಾ​ಭಿ​ವೃದ್ಧಿ ಅಥವಾ ಗೃಹ ಖಾತೆ​ಯನ್ನು ಹಿಂಪ​ಡೆ​ಯ​ಬೇಕು ಎಂದು ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಬಣವೂ ಒತ್ತಾಯ ನಡೆಸುತ್ತಿದೆ.

ಪರ​ಮೇ​ಶ್ವರ್‌ ಅವರು ತಮ್ಮ ಬಳಿ ಇರುವ ಹೆಚ್ಚು​ವರಿ ಖಾತೆ​ಗಳ ಪೈಕಿ ಯುವಜನ ಹಾಗೂ ಕ್ರೀಡಾ ಖಾತೆ​ಯನ್ನು ಬಿಟ್ಟು​ಕೊ​ಡಲು ಒಪ್ಪಿ​ದ್ದಾರೆ ಎನ್ನ​ಲಾ​ಗಿದೆ. ಆದರೆ, ತಾವು ಉಪ ಮುಖ್ಯ​ಮಂತ್ರಿ​ಯಾ​ಗಿ​ರು​ವು​ದ​ರಿಂದ ಗೃಹ ಹಾಗೂ ಬೆಂಗ​ಳೂರು ನಗ​ರಾ​ಭಿ​ವೃದ್ಧಿ ಎರಡು ಖಾತೆ​ಗಳು ತಮಗೆ ಉಳಿ​ಯ​ಬೇಕು. ಇಲ್ಲ​ದಿ​ದ್ದರೆ, ತಮಗೆ ನೀಡಿ​ರುವ ಉಪ ಮುಖ್ಯ​ಮಂತ್ರಿ ಹುದ್ದೆಗೆ ಯಾವುದೇ ಗೌರವ ಬರು​ವು​ದಿಲ್ಲ ಎಂಬ ವಾದ​ ಮಂದಿ​ಟ್ಟಿ​ದ್ದಾರೆ ಎನ್ನ​ಲಾ​ಗಿ​ದೆ.

ಆದರೆ, ಇದನ್ನು ಸಿದ್ದ​ರಾ​ಮಯ್ಯ ಬಣ ಒಪ್ಪು​ತ್ತಿಲ್ಲ. ಸಂಪು​ಟಕ್ಕೆ ನೂತ​ನ​ವಾಗಿ ಸೇರ್ಪ​ಡೆ​ಯಾ​ದ​ವ​ರಲ್ಲೂ ಹಿರಿಯ ಸಚಿ​ವ​ರಿ​ದ್ದಾರೆ. ಅವ​ರಿಗೆ ಪ್ರಮುಖ ಖಾತೆ​ಯನ್ನು ನೀಡ​ಬೇ​ಕಾದ ಅಗ​ತ್ಯ​ವಿದೆ. ಹೀಗಾಗಿ ಪರ​ಮೇ​ಶ್ವರ್‌ ತಮ್ಮ ಬಳಿ ಇರುವ ಎರಡು ಪ್ರಮುಖ ಖಾತೆ​ಗಳ ಪೈಕಿ ಒಂದನ್ನು ಬಿಟ್ಟು​ಕೊ​ಡ​ಬೇಕು ಎಂದು ವಾದಿ​ಸು​ತ್ತಿ​ದ್ದಾರೆ ಎನ್ನ​ಲಾ​ಗಿದೆ.

ಅದೇ ರೀತಿ ಡಿ.ಕೆ. ಶಿವ​ಕು​ಮಾರ್‌ ಬಳಿ ಇರುವ ಜಲ​ಸಂಪ​ನ್ಮೂಲ ಖಾತೆ ಹಾಗೂ ವೈದ್ಯ​ಕೀಯ ಶಿಕ್ಷಣ ಖಾತೆ​ಗಳ ಪೈಕಿ ಒಂದನ್ನು, ದೇಶ​ಪಾಂಡೆ ಬಳಿ ಇರುವ ಕಂದಾಯ ಹಾಗೂ ಕೌಶ​ಲ್ಯಾ​ಭಿ​ವೃದ್ಧಿ, ಕೆ.ಜೆ. ಜಾಜ್‌ರ್‍ ಬಳಿ ಇರುವ ಕೈಗಾ​ರಿಕೆ ಹಾಗೂ ಐಟಿ-ಬಿಟಿ, ಯು.ಟಿ. ಖಾದರ್‌ ಬಳಿ ಇರುವ ನಗ​ರಾ​ಭಿ​ವೃದ್ಧಿ ಹಾಗೂ ವಸತಿ, ಜಮೀರ್‌ ಅಹ್ಮದ್‌ ಬಳಿ ಇರುವ ಆಹಾರ ಮತ್ತು ನಾಗ​ರಿಕ ಪೂರೈಕೆ ಹಾಗೂ ಅಲ್ಪ​ಸಂಖ್ಯಾತ ಅಭಿ​ವೃದ್ಧಿ ಖಾತೆ​ಗಳ ಪೈಕಿ ತಲಾ ಒಂದೊಂದು ಖಾತೆ​ಗ​ಳನ್ನು ಬಿಡ​ಬೇಕು ಎಂದು ಸೂಚಿ​ಸ​ಲಾ​ಗಿದೆ.

ಆದರೆ, ಈ ಸಚಿ​ವರು ಪ್ರಮುಖ ಖಾತೆ​ಗ​ಳನ್ನು ಉಳಿ​ಸಿ​ಕೊ​ಳ್ಳಲು ಪ್ರಯತ್ನ ನಡೆ​ಸು​ತ್ತಿ​ರು​ವುದು ಸಮ​ಸ್ಯೆ​ಯಾ​ಗಿದೆ. ಈ ಹಿನ್ನೆ​ಲೆ​ಯಲ್ಲಿ ವೇಣು​ಗೋ​ಪಾಲ್‌ ಮಧ್ಯ​ಸ್ಥಿಕೆ ಅನಿ​ವಾ​ರ್ಯ​ವಾ​ಗಿ​ ಪರಿಣಮಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿಗೆ ಸಮಾಧಿ ತೋಡುತ್ತೇವೆ: ಕಾಂಗ್ರೆಸ್ ವೋಟ್ ಚೋರಿ ಸಮಾವೇಶದಲ್ಲಿ ಕಾರ್ಯಕರ್ತರ ಘೋಷಣೆ
'ಇದಪ್ಪಾ ಕಾನ್ಪಿಡೆನ್ಸ್‌ ಅಂದ್ರೆ..' ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬರೋ ಮುನ್ನವೇ 12 ಸಾವಿರ ಲಡ್ಡು ಮಾಡಿಸಿಟ್ಟ ಸ್ಪರ್ಧಿ!