ನಿಶಕ್ತಿಯಿಂದ ಬಳಲುತ್ತಿದ್ದಾರಾ ರಮ್ಯಾ? ಅನುಮಾನ ಮೂಡಿಸಿದೆ ಈ ಫೋಟೋ!

Published : Nov 28, 2018, 11:52 AM ISTUpdated : Nov 28, 2018, 01:19 PM IST
ನಿಶಕ್ತಿಯಿಂದ ಬಳಲುತ್ತಿದ್ದಾರಾ ರಮ್ಯಾ? ಅನುಮಾನ ಮೂಡಿಸಿದೆ ಈ ಫೋಟೋ!

ಸಾರಾಂಶ

ಮಂಡ್ಯದ ಗಂಡು ಅಂಬರೀಶ್ ಅಂತಿಮ ಕ್ರಿಯೆಗೆ ನಟಿ ರಮ್ಯಾ ಗೈರಾಘಿದ್ದು, ಈ ವಿಚಾರ ಹಲವಾರು ಊಹಾಪೋಹಗಳನ್ನು ಹುಟ್ಟು ಹಾಕಿದ್ದವು. ಕಾಂಗ್ರೆಸ್ ನಾಯಕಿ ನಟಿ ರಮ್ಯಾ ಕೂಡಾ ಈ ಕುರಿತಾಗಿ ಯಾವುದೇ ಸ್ಪಷ್ಟೀಕರಣ ನೀಡದಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ರಮ್ಯಾ ತನ್ನ ಇನ್ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದು ಅವರಿಗೇನಾಗಿದೆ ಎಂಬ ಅನುಮಾನಗಳು ಹುಟ್ಟಿಕೊಳ್ಳುವಂತೆ ಮಾಡಿದೆ.  

ಮಂಡ್ಯದ ಗಂಡು ನಟ ಅಂಬರೀಶ್ ಅಂತಿಮ ದರ್ಶನ ಪಡೆಯಲು ಬಾರದ ರಮ್ಯಾ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಕ್ರೋಶಿತ ಜನರು ರಮ್ಯಾಗೆ ಶ್ರದ್ಧಾಂಜಲಿ ಸಲ್ಲಿಸುವ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದರು. ಇದಾದ ಬಳಿಕ ಡಿಕೆ ಶಿವಕುಮಾರ್ ಕಾಲುನೋವಿನ ಕಾರಣದಿಂದಾಗಿ ರಮ್ಯಾಗೆ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂಬ ಸ್ಪಷ್ಟೀಕರಣ ನೀಡಿದ್ದರು. ಇದೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ನಟಿ ಮಂಡ್ಯದ ಹುಡುಗಿ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ರಮ್ಯಾ ವಿರುದ್ಧ ನಟ ಜಗ್ಗೇಶ್ ಕಿಡಿ

ಕಲಿಯುಗದ ಕರ್ಣನ ನಿಧನದ ಬಳಿಕ ಟ್ವೀಟ್ ಒಂದನ್ನು ಮಾಡಿ ಸಂತಾಪ ಸೂಚಿಸಿದ್ದ ರಮ್ಯಾ ಮೌನ ವಹಿಸಿದ್ದರು. ಆದರೀಗ ತಮ್ಮ ದೀರ್ಘ ಮೌನವನ್ನು ಮುರಿದಿರುವ ರಮ್ಯಾ ಇನ್ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಔಷಧಿಯೊಂದರ ಫೋಟೋ ಶೇರ್ ಮಾಡಿ 'ಕಾಪಾಡಿಕೊಳ್ಳಲು' ಎಂದು ಬರೆದುಕೊಂಡಿದ್ದಾರೆ. ತಾವು ಯಾಕೆ ಅಂಬಿ ದರ್ಶನಕ್ಕೆ ಬಂದಿಲ್ಲ ಎಂದು ಸ್ಪಷ್ಟನೆ ನೀಡದ ರಮ್ಯಾ, ಈ ಫೋಟೋ ಹಂಚಿಕೊಂಡಿರುವುದು ಮಾತ್ರ ಬಹಳಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ: ಅಂಬಿ ಅಂಕಲ್ ದರ್ಶನಕ್ಕೆ ಕೊನೆಗೂ ಬಾರದ ರಮ್ಯಾ ಎಲ್ಲಿದ್ದಾರೆ?

ಫೋಟೋದಲ್ಲಿರುವ ಕ್ಯಾಪ್ಸೂಲ್ ಯಾವುದು? ಯಾಕಾಗಿ ಬಳಸುತ್ತಾರೆ?

ರಮ್ಯಾ 'ಲಯನ್ ಹಾರ್ಟ್' ಎಂಬ ಕ್ಯಾಪ್ಸೂಲ್ ಪೋಟೋ ಶೇರ್ ಮಾಡಿಕೊಂಡಿದ್ದು, ಇದನ್ನು ಯಾಕಾಗಿ ಬಳಸುತ್ತಾರೆ ಎಂದು ಹುಡುಕಾಟ ನಡೆಸಿದಾಗ ಉರಿಯೂತ, ಸಂಧಿವಾತ, ರಕ್ತದೊತ್ತಡ, ಉರಿಯೂತ, ಹೃದಯ ಸಂಬಂಧಿ ಕಾಯಿಲೆ, ನಿಶಕ್ತಿ ಹಾಗೂ ಮಾನಸಿಕ ಒತ್ತಡದ ನಿವಾರಣೆಗೆ ಇದನ್ನು ವೈದ್ಯರು ಸೂಚಿಸುತ್ತಾರೆ ಎಂದು ಗೂಗಲ್‌ನಲ್ಲಿ ಮಾಹಿತಿ ನೀಡಲಾಗಿದೆ.

ರಮ್ಯಾ ಶೇರ್ ಮಾಡಿಕೊಂಡಿರುವ ಫೋಟೋ ಹಾಗೂ ಬರೆದುಕೊಂಡಿರುವ ಸಾಲುಗಳನ್ನು ಗಮನಿಸಿದರೆ ನಿಶಕ್ತಿಯಿಂದ ಬಳಲುತ್ತಿದ್ದಾರಾ ಎಂಬ ಅನುಮಾನಗಳು ಮೂಡುವುದು ಸಹಜ. ಈ ಹಿಂದೆ ಕಾಲಿನ ರಮ್ಯಾ ತಮ್ಮನ್ನು ತಾವು ಯಾವುದರಿಂದ 'ಕಾಪಾಡಿಕೊಳ್ಳಲು' ಈ ಔಷಧಿ ಬಳಸುತ್ತಿದ್ದಾರೆ ಎಂಬುವುದೂ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ. ಅಂತಿಮವಾಗಿ ಕಾಂಗ್ರೆಸ್ ನಾಯಕಿ ಯಾಕಿಷ್ಟು ಮೌನ ವಹಿಸಿದ್ದಾರೆ, ಯಾಕೆ ಸಾರ್ವಜನಿಕವಾಗಿ ಕಾಣಿಸುತ್ತಿಲ್ಲ ಎಂಬುವುದೂ ಇನ್ನೂ ನಿಗೂಢ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!
ಪ್ರಧಾನಿ ಮೋದಿ ಸಮಾಧಿ ಉದ್ಘೋಷದ ವಿರುದ್ಧ ಸಂಸತ್ತಲ್ಲಿ ಗದ್ದಲ: ಕ್ಷಮೆಗೆ ಆಗ್ರಹ