ಏನು ಷರತ್ತಿಲ್ಲ, ಯಾವಾಗ ಬರ್ಲಿ ಹೇಳಿ?: ರಾಹುಲ್ ಗಾಂಧಿ!

Published : Aug 14, 2019, 07:24 PM ISTUpdated : Aug 14, 2019, 07:36 PM IST
ಏನು ಷರತ್ತಿಲ್ಲ, ಯಾವಾಗ ಬರ್ಲಿ ಹೇಳಿ?: ರಾಹುಲ್ ಗಾಂಧಿ!

ಸಾರಾಂಶ

ಕಣಿವೆಗೆ ಭೇಟಿ ನೀಡಲು ಸಿದ್ಧ ಎಂದ  ರಾಹುಲ್ ಗಾಂಧಿ| ಪೂರ್ವ ಷರತ್ತಿಲ್ಲದೇ ಕಣಿವೆಗೆ ಭೇಟಿ ನೀಡುತ್ತೇನೆ ಎಂದ ರಾಹುಲ್| ನಾನು ಯಾವಾಗ ಬರಲಿ ಹೇಳಿ ಎಂದು ರಾಜ್ಯಪಾಲರನ್ನು ಕೇಳಿದ ರಾಹುಲ್| ರಾಜ್ಯಪಾಲ್ ಸತ್ಯಪಾಲ್ ಮಲಿಕ್ ಆರೋಪಕ್ಕೆ ರಾಹುಲ್ ತಿರುಗೇಟು|

ನವದೆಹಲಿ(ಆ.14): ಯಾವುದೇ ಪೂರ್ವ ಷರತ್ತಿಲ್ಲದೇ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ತಾವು ಸಿದ್ಧ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಾವು  ಯಾವಾಗ ಭೇಟಿ ನೀಡಬೇಕು ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಕೇಳಿದ್ದಾರೆ. 

ಯಾವುದೇ ಷರತ್ತಿಲ್ಲದೇ ಜಮ್ಮು-ಕಾಶ್ಮೀರ ಜನರನ್ನು ಭೇಟಿ ಮಾಡಲು ರಾಜ್ಯಪಾಲರು ಸಲಹೆ ನೀಡಿದ್ದು, ಅವರ ಆಹ್ವಾನವನ್ನು ತಾವು ಒಪ್ಪಿಕೊಂಡಿದ್ದಾಗಿ ರಾಹುಲ್ ತಿಳಿಸಿದ್ದಾರೆ.

ಕಾಶ್ಮೀರಕ್ಕೆ ಭೇಟಿ ನೀಡಲು ರಾಹುಲ್ ಗಾಂಧಿ ಷರತ್ತು ಹಾಕುತ್ತಿದ್ದಾರೆ ಅಲ್ಲದೆ ವಿರೋಧ ಪಕ್ಷದ ನಾಯಕರ ನಿಯೋಗ ಕರೆತಂದು ಅನಿಶ್ಚಿತತೆ ಉಂಟುಮಾಡಲು ನೋಡುತ್ತಿದ್ದಾರೆ ಎಂದು ನಿನ್ನೆ ರಾಜ್ಯಪಾಲ ಸತ್ಯಪಾಲ್ ಮಲಿಕ್ ಆರೋಪಿಸಿದ್ದರು.

ಅಲ್ಲದೇ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿಗೆ ವಿಶೇಷ ವಿಮಾನದಲ್ಲಿ ಕರತಂದು ರಾಜ್ಯ ಸುತ್ತಿಸುವುದಾಗಿ ರಾಜ್ಯಪಾಲರು ವ್ಯಂಗ್ಯವಾಡಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!
Vastu Shastra: ನೆನಪಿಡಿ, ಅದೃಷ್ಟ ಕೈಹಿಡಿಯಲು ದೇವಸ್ಥಾನಕ್ಕೆ ಈ ಮೂರು ವಸ್ತುಗಳನ್ನ ಗುಟ್ಟಾಗಿ ದಾನ ಮಾಡ್ಬೇಕು!