
ಬೆಂಗಳೂರು[ಸೆ.30]: ಇಡಿ ಸುಳಿಯಲ್ಲಿ ಸಿಲುಕಿರುವ ಡಿ. ಕೆ. ಶಿವಕುಮಾರ್ ಹೊರ ಬರಲು ಹರ ಸಾಹಸ ನಡೆಸುತ್ತಿದ್ದಾರೆ. ಒಂದು ತಿಂಗಳಿನಿಂದ ವಿಚಾರಣೆ ಎದುರಿಸುತ್ತಿರುವ ಡಿಕೆಶಿ ಜಾಮೀನು ಸಿಗದೆ ತಿಹಾರ್ ಜೈಲು ಸೇರಿದ್ದಾರೆ. ಸದ್ಯ ಇನ್ನೂ 14 ದಿನ ಡಿಕೆಶಿ ಜೈಲಿನಲ್ಲಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
"
ಡಿಕೆಶಿ ಭೇಟಿಯಾದ ಅಹ್ಮದ್ ಪಟೇಲ್, ಮಹತ್ವದ ಸಂದೇಶ ತಲುಪಿಸಿದ ಸೋನಿಯಾ ಆಪ್ತ!
ಹೌದು ಪದೇ ಪದೇ ಜಾಮೀನು ಅರ್ಜಿ ವಜಾ ಹಾಗೂ ವಿಚಾರಣೆ ಮುಂದೂಡಿಕೆಯಾದ ಪರಿಣಾಮ ಡಿಕೆಶಿ ತಿಹಾರ್ ಜೈಲು ಸೇರಿದ್ದಾರೆ. ಹೀಗಿರುವಾಗ ಇಂದು ಸೆ. 30ರಂದು ನಡೆಯಬೇಕಿದ್ದ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 14 ಮುಂದೂಡಿಯಾಗಿದೆ. ಹೀಗಾಗಿ ನಾಳೆ[ಸೆ.30]ಗೆ ಡಿಕೆಶಿ ನ್ಯಾಯಾಂಗ ಬಂಧನ ಅಂತ್ಯವಾದರೂ ಮತ್ತೆ 14 ದಿನ ಜೈಲಿನಲ್ಲಿರಬೇಕಾಗುತ್ತದೆ.
ಅಣ್ಣ ಡಿಕೆಶಿ ಬೆನ್ನಲ್ಲೇ ತಮ್ಮನಿಗೂ ED ನೋಟಿಸ್!
ಅತ್ತ ಡಿಕೆಶಿ ತಿಹರ್ ಜೈಲಿನಲ್ಲಿದ್ದು ಸಂಕಷ್ಟವನ್ನೆದುರಿಸುತ್ತಿದ್ದರೆ, ಇತ್ತ ತಮ್ಮ ಡಿ. ಕೆ ಸುರೇಶ್ ಗೂ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿದೆ. ಡಿಕೆ ಕುಟುಂಬ ಈ ಸಂಕಷ್ಟಗಳ ಸರಮಾಲೆಯಿಂದ ಹೇಗೆ ಹೊರ ಬರುತ್ತೆ ಕಾದು ನೊಡಬೇಕಷ್ಟೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.