
ನವದೆಹಲಿ(ಎ.27): ದೆಹಲಿ ಪಾಲಿಕೆ ಚುನಾವಣೆಯ ಓಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಪ್ರಗತಿ ಕಂಡಿದ್ದು ಸೋಲು ಎಂದು ಭಾವಿಸುವುದಿಲ್ಲ.ಹಣ ಬೆಂಬಲ ಮತ್ತು ಅಲ್ಲಿನ ಗನರ್ವರ್ ಕುಮ್ಮಕ್ಕಿನಿಂದ ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಮುಂದಿನ ಚುನಾವಣಾ ಮೈತ್ರಿ ಬಗ್ಗೆ ಯಾವುದೇ ಮಾತುಕತೆಗಳು ನಡೆದಿಲ್ಲ, ಬೈ ಎಲೆಕ್ಷನ್ ಗೆಲುವು ಮುಂದಿನ ಕಾಂಗ್ರೆಸ್ ಚುನಾವಣಾ ಗೆಲುವಿಗೆ ನಾಂದಿಯಾಗಿದೆ. ಇದರಿಂದ ಭಯಗೊಂಡ ಬಿಜೆಪಿಯ ರಾಷ್ಟ್ರೀಯ ನಾಯಕರೇ ಮಿಷನ್ 150ಯನ್ನು ಮಿಷನ್ 50ಕ್ಕೆ ಇಳಿಸಿದ್ದಾರೆ.
ಕಾಂಗ್ರೆಸ್ಸಿನಲ್ಲಿ ನೀಡುತಿದ್ದ ಗೌರವವನ್ನು ಬಿಜೆಪಿಯಲ್ಲೂ ನೀಡಿ ಎಂದು ಬ್ರಿಜೇಶ್ ಕಾಳಪ್ಪ ಎಸ್.ಎಂ.ಕೃಷ್ಣರ ಮುಂದಿನ ಪರಿಸ್ಥಿತಿಯ ಬಗ್ಗೆ ಹೇಳಿದ್ದಾರೆ. ಅಲ್ಲದೇ ಬಾಬ್ರಿ ಮಸೀದಿ ವಿಚಾರದ ಕೇಸು ಮರು ವಿಚಾರಣೆ ಕುರಿತು ಮೋದಿ ತಮ್ಮ ಗುರು ಅಡ್ವಾಣಿಗೆ ಇಂತಹ ಗುರುದಕ್ಷಿಣೆ ನೀಡುತ್ತಾರೆಂದು ಗೊತ್ತಿರಲಿಲ್ಲ. ಪ್ರಧಾನಿ ಮೋದಿ ಗುರುವಿಗೆ ಮಾಡಿದ ಬಹುದೊಡ್ಡ ದ್ರೋಹ ಇದಾಗಿದ್ದು, ಅಮಿತ್ ಶಾ, ಯಡಿಯೂರಪ್ಪ, ಜನಾರ್ಧನ ರೆಡ್ಡಿಗೆ ಸಿಕ್ಕ ಕ್ಲೀನ್ ಚಿಟ್ ಅಡ್ವಾಣಿಗೆ ಸಿಗಲಿಲ್ಲವೇಕೆ? ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಮಡಿಕೇರಿಯಲ್ಲಿ ಹೇಳಿಕೆ ನೀಡಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.