
ಗುಂಡ್ಲುಪೇಟೆ (ಮಾ.28): ಗುಂಡ್ಲುಪೇಟೆ ಉಪಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಕಣ್ಣೀರಿಟ್ಟ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ ಪ್ರಸಾದ್, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವಿರೋಧವಾಗಿ ಆಯ್ಕೆ ಮಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು, ಆದರೆ ಈಗ ಬಿಜೆಪಿಯ ಎಲ್ಲಾ ಗಂಡಸರು ಚುಚ್ಚಿ ಮಾತನಾಡುತ್ತಿದ್ದಾರೆ, ಇದನ್ನು ಹೇಗೆ ಸಹಿಸಲಿ? ಮಾನಸಿಕ ನೋವು ಸಹಿಸಿಕೊಳ್ಳುವುದು ಕಷ್ಟ, ಎಂದು ಗೀತಾ ಮಹದೇವ ಪ್ರಸಾದ್ ಕಣ್ಣೀರಿಟ್ಟಿದ್ದಾರೆ.
ಬೇಕಿತ್ತಾ ನಂಗೆ ಇದೆಲ್ಲಾ ಅನ್ನಿಸಿಬಿಡುತ್ತದೆ. ಸುಸಂಸ್ಕೃತ ಕುಟುಂಬ ನಮ್ಮದು,ಬಿಜೆಪಿಯವರು ಎಷ್ಟು ಅವಹೇಳನಕಾರಿಯಾಗಿ ಮಾತನಾಡ್ತಾರೆ,ಈ ರೀತಿ ಮಾಡುವುದನ್ನು ನಿಲ್ಲಿಸಬೇಕು. ನನ್ನ ಹಿನ್ನೆಲೆ ಗೊತ್ತಿಲ್ಲದೇ ಏನೇನೋ ಮಾತಾಡುವುದು ನಿಲ್ಲಬೇಕು, ಮಾಧ್ಯಮದವರಾದರೂ ನನ್ನ ನೆರವಿಗೆ ಬರಬೇಕು, ಎಂದು ಗೀತಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.