ಗಾಂಧೀಜಿ ಹತ್ಯೆಯಿಂದ ಕಾಂಗ್ರೆಸ್'ಗೇ ಹೆಚ್ಚು ಲಾಭ: ಉಮಾ ಭಾರತಿ

Published : Oct 13, 2017, 01:01 PM ISTUpdated : Apr 11, 2018, 01:04 PM IST
ಗಾಂಧೀಜಿ ಹತ್ಯೆಯಿಂದ ಕಾಂಗ್ರೆಸ್'ಗೇ ಹೆಚ್ಚು ಲಾಭ: ಉಮಾ ಭಾರತಿ

ಸಾರಾಂಶ

ಗಾಂಧಿ ಹತ್ಯೆಯಿಂದಾಗಿ ಆರ್'ಎಸ್'ಎಸ್ ಹಾಗೂ ಭಾರತೀಯ ಜನ ಸಂಘ ಸಾಕಷ್ಟು ಸಂಕಷ್ಟ ಎದುರಿಸಿದೆ. ಇದಕ್ಕಾಗಿ ನಾವು ಜೈಲಿಗೂ ಹೋಗಬೇಕಾಯಿತು. ದೇಶವೂ ಗಾಂಧಿ ಹತ್ಯೆಯಿಂದ ನರಳಿತು ಎಂದು ಉಮಾ ಭಾರತಿ ಹೇಳಿದ್ದಾರೆ.

ಅಹಮದಾಬಾದ್(ಅ.13): ಮಹಾತ್ಮ ಗಾಂಧಿ ಹತ್ಯೆಯಿಂದ ಕಾಂಗ್ರೆಸ್‌'ಗೇ ಹೆಚ್ಚು ಲಾಭವಾಗಿದೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

ಗಾಂಧಿ ಹತ್ಯೆಯ ಮರು ತನಿಖೆಗೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಉಮಾ ಭಾರತಿ, ‘ಗಾಂಧೀಜಿಯನ್ನು ಗೋಡ್ಸೆ ಹತ್ಯೆ ಮಾಡಿದಾಗಿನಿಂದಲೂ ಈ ವಿಷಯ ಪ್ರಸ್ತಾಪವಾಗುತ್ತಿದೆ. ಗಾಂಧೀಜಿ ಹತ್ಯೆಯಿಂದ ಕಾಂಗ್ರೆಸ್ ಮಾತ್ರ ಪ್ರಯೋಜನ ಪಡೆದುಕೊಂಡಿದೆ. ಏಕೆಂದರೆ, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂಬುದು ಗಾಂಧೀಜಿ ಅವರು ಸಲಹೆ ನೀಡಿದ್ದರು’ ಎಂದು ಹೇಳಿದ್ದಾರೆ.

ಗಾಂಧಿ ಹತ್ಯೆಯಿಂದಾಗಿ ಆರ್'ಎಸ್'ಎಸ್ ಹಾಗೂ ಭಾರತೀಯ ಜನ ಸಂಘ ಸಾಕಷ್ಟು ಸಂಕಷ್ಟ ಎದುರಿಸಿದೆ. ಇದಕ್ಕಾಗಿ ನಾವು ಜೈಲಿಗೂ ಹೋಗಬೇಕಾಯಿತು. ದೇಶವೂ ಗಾಂಧಿ ಹತ್ಯೆಯಿಂದ ನರಳಿತು ಎಂದು ಉಮಾ ಭಾರತಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿಂದೂಗಳಿಗಿಂತ ಮುಸ್ಲಿಮರ ಮೇಲೆ ಹೆಚ್ಚು ಬಾಂಡ್: ಎಸ್‌ಡಿಪಿಐ ಆರೋಪಕ್ಕೆ ಅಂಕಿ-ಅಂಶ ಸಮೇತ ಕಮಿಷನರ್ ತಿರುಗೇಟು!
ಕರೆಂಟ್‌ ಅಕೌಂಟಲ್ಲಿ ₹150 ಕೋಟಿ ಅಲ್ಲ, ₹1 ಸಾವಿರ ಕೋಟಿ ವಹಿವಾಟು