ಬೆಕ್ಕಿಗೆ ಹುಷಾರಿಲ್ಲವೆಂದು ಆ್ಯಂಬುಲೆನ್ಸ್’ಗೆ ತುರ್ತು ಕರೆ

Published : Jan 29, 2018, 10:52 AM ISTUpdated : Apr 11, 2018, 01:10 PM IST
ಬೆಕ್ಕಿಗೆ ಹುಷಾರಿಲ್ಲವೆಂದು ಆ್ಯಂಬುಲೆನ್ಸ್’ಗೆ ತುರ್ತು ಕರೆ

ಸಾರಾಂಶ

ತುರ್ತು ಚಿಕಿತ್ಸೆ ಅಗತ್ಯವಿದ್ದಾಗ ಆ್ಯಂಬುಲೆನ್ಸ್‌ಗೆ ಕರೆ ಮಾಡುವವರನ್ನು ನೋಡಿರಬಹುದು. ಆದರೆ ಬ್ರಿಟನ್‌ನಲ್ಲಿ ಬೆಕ್ಕೊಂದು ಅಸ್ವಸ್ಥಗೊಂಡಿದೆ ಎಂದು ಮಹಿಳೆಯೊಬ್ಬರು ತುರ್ತು ಸೇವೆಗೆ ಕರೆ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.

ಲಂಡನ್ : ತುರ್ತು ಚಿಕಿತ್ಸೆ ಅಗತ್ಯವಿದ್ದಾಗ ಆ್ಯಂಬುಲೆನ್ಸ್‌ಗೆ ಕರೆ ಮಾಡುವವರನ್ನು ನೋಡಿರಬಹುದು. ಆದರೆ ಬ್ರಿಟನ್‌ನಲ್ಲಿ ಬೆಕ್ಕೊಂದು ಅಸ್ವಸ್ಥಗೊಂಡಿದೆ ಎಂದು ಮಹಿಳೆಯೊಬ್ಬರು ತುರ್ತು ಸೇವೆಗೆ ಕರೆ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. ಇಂತಹ ವಿಲಕ್ಷಣ ಕರೆಗಳ ಬಗ್ಗೆ ಸರ್ಕಾರ ವರದಿ ಬಿಡುಗಡೆ ಮಾಡಿದೆ.

ಈ ಕರೆದಾಖಲೆಯಲ್ಲಿ ಕೆಲವರು ಬಾಯಿ ಒಣಗಿದಂತಾಗಿದೆ ಎಂದು ಕರೆ ಮಾಡಿದರೆ, ಇನ್ನೊಬ್ಬ ಮಹಿಳೆ ಕೃತಕ ಕಣ್ಣು ರೆಪ್ಪೆಗಳಿಂದ ಕಿರಿಕಿರಿ ಉಂಟಾಗುತ್ತಿದೆ ಎಂದು ಕರೆ ಮಾಡಿದ್ದಾರೆ.

ಇನ್ನು ಕೆಲವರು ತರಕಾರಿ ಹೆಚ್ಚುವ ವೇಳೆ ಕೈಬೆರಳನ್ನು ಕತ್ತರಿಸಿಕೊಂಡಿದ್ದಾಗಿ ಕರೆ ಮಾಡಿದ್ದರು! ಆ್ಯಂಬುಲೆನ್ಸ್ ಸೇವೆಗೂ ಕೂಡ ಒಬ್ಬರು ಕರೆ ಮಾಡಿ ಫ್ರಿಜ್‌ನೊಳಗೆ ಇಟ್ಟ ಮೊಟ್ಟೆ ಮಧ್ಯರಾತ್ರಿ ಕೆಳಗೆ ಬಿದ್ದಿತ್ತು ಎಂದಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ
ಪ್ರವಾಸಿಗರ ಸ್ವರ್ಗ.. ಅಸ್ಸಾಂ ರಾಜ್ಯ ಯಾವುದಕ್ಕೆ ಪ್ರಸಿದ್ಧ ನಿಮಗೆ ಗೊತ್ತೇ?