ನೋಟು ನಿಷೇಧ: ಮಾಜಿ ಸಚಿವ ರಾಮ್​ದಾಸ್​ ವಿರುದ್ಧ ದೂರು

Published : Nov 22, 2016, 02:57 PM ISTUpdated : Apr 11, 2018, 01:07 PM IST
ನೋಟು ನಿಷೇಧ: ಮಾಜಿ ಸಚಿವ ರಾಮ್​ದಾಸ್​ ವಿರುದ್ಧ ದೂರು

ಸಾರಾಂಶ

ನೋಟು ಮುದ್ರಣದಲ್ಲಿನ ಕಾರ್ಯ ಚಟುವಟಿಕೆಗಳನ್ನು ಬಹಿರಂಗಪಡಿಸುವ ಮೂಲಕ ರಾಮದಾಸ್​ ದೇಶದ ಕಾರ್ಯನೀತಿ ವಿರುದ್ಧ ವರ್ತಿಸಿದ್ದಾರೆ. ಆದ್ದರಿಂದ ರಾಮದಾಸ್​ ಹೇಳಿಕೆ ಆಧರಿಸಿ ಅವರಿಗೆ ಮಾಹಿತಿ ಸೋರಿಕೆ ಮಾಡಿದ ಆರ್​ಬಿಐ ಅಧಿಕಾರಿಗಳು, ನೌಕರರನ್ನು ಒಳಗೊಂಡಂತೆ ಎಲ್ಲರ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರು ದಾಖಲಿಸಿದ್ದಾರೆ.

ಮೈಸೂರು (ನ.22): ದೇಶಾದ್ಯಂತ ನೋಟ್​ ನಿಷೇಧವಾದ ಬಳಿಕ, ರಿಸರ್ವ್ ಬ್ಯಾಂಕಿನಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ಮುದ್ರಣವಾಗುತ್ತಿದ್ದದ್ದು ನನಗೆ ಮೊದಲೇ ಗೊತ್ತಿತ್ತೆಂದು ಮಾಜಿ ಸಚಿವ ಎಸ್​.ಎ. ರಾಮದಾಸ್​ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಎನ್​.ಎಸ್​.ಯು.ಐ. ಘಟಕ ಕಾರ್ಯಕರ್ತರು ರಾಮದಾಸ್​ ವಿರುದ್ಧ ಪೊಲೀಸ್​ ಆಯುಕ್ತರಿಗೆ ದೂರು ನೀಡಿದ್ದಾರೆ.

ನೋಟು ಮುದ್ರಣದಲ್ಲಿನ ಕಾರ್ಯ ಚಟುವಟಿಕೆಗಳನ್ನು ಬಹಿರಂಗಪಡಿಸುವ ಮೂಲಕ ರಾಮದಾಸ್​ ದೇಶದ ಕಾರ್ಯನೀತಿ ವಿರುದ್ಧ ವರ್ತಿಸಿದ್ದಾರೆ. ಆದ್ದರಿಂದ ರಾಮದಾಸ್​ ಹೇಳಿಕೆ ಆಧರಿಸಿ ಅವರಿಗೆ ಮಾಹಿತಿ ಸೋರಿಕೆ ಮಾಡಿದ ಆರ್​ಬಿಐ ಅಧಿಕಾರಿಗಳು, ನೌಕರರನ್ನು ಒಳಗೊಂಡಂತೆ ಎಲ್ಲರ ವಿರುದ್ಧ ಕ್ರಮ ಜರುಗಿಸಬೇಕೆಂದು ದೂರು ದಾಖಲಿಸಿದ್ದಾರೆ.

ಇನ್ನೊಂದೆಡೆ ಮಾಜಿ ಸಚಿವ ಎಸ್​.ಎ. ರಾಮದಾಸ್​ ಅವರೂ ಸಹ ಶಾಸಕ ಎಂ.ಕೆ. ಸೋಮಶೇಖರ್​ ವಿರುದ್ಧ ತಮ್ಮ ಬೆಂಬಲಿಗರ ಮೂಲಕ ದೂರು ನೀಡಿದ್ದಾರೆ. ಸೋಮಶೇಖರ್​ ಅವರು ನೋಟ್​ ನಿಷೇಧ ವಿಚಾರದಲ್ಲಿ ನಾನು ನೀಡಿದ ಹೇಳಿಕೆಯನ್ನು ತಿರುಚಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಆರೋಪಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ