
ಹೊಸದಿಲ್ಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಟ್ವಿಟರ್ ನಲ್ಲಿ ಜಾಲತಾಣಿಗರು ರಾಹುಲ್ ಗಾಂಧಿಯನ್ನು ಸರಿಯಾಗಿಯೇ ಕಾಲೆಳೆದಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಕಾರ್ಯಕರ್ತರು ಮತ್ತು ಒಬಿಸಿ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ಹೆಚ್ಚು ಪರಿಶ್ರಮವಹಿಸಿ ಕೆಲಸ ಮಾಡುವ ಭಾರತೀಯರು ಮುಖ್ಯ ವೇದಿಕೆಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸರಕಾರವನ್ನು ಗುರಿ ಮಾಡಿಸಿಕೊಂಡು ವಾಗ್ದಾಳಿ ಮಾಡುವ ಭರದಲ್ಲಿ ಹೇಳಿದ ಮಾತು ಟ್ರೋಲಿಗರಿಗೆ ಆಹಾರವಾಗಿದೆ.
ಲಿಂಬು ಪಾನಿ ಮಾರುವವವರು ಪರಿಶ್ರಮದಿಂದ ಕೋಕಾ ಕೋಲಾ ಕಂಪನಿ ಮಾಲೀಕರಾದರು. ರಸ್ತೆ ಬದಿ ಡಾಬಾ ನಡೆಸುತ್ತಿದ್ದವನು ಪರಿಶ್ರಮದಿಂದ ಮೆಕ್ ಡೋನಾಲ್ಡ್ ದಂತಹ ಕಂಪನಿ ತೆರೆದರು ಎಂದು ರಾಹುಲ್ ಹೇಳಿದ ನಂತರ ಟ್ವಿಟರ್ ನ ಚಿತ್ರಣವೇ ಬದಲಾಯಿತು. ನೀವು ಒಂದಿಷ್ಟು ಟ್ರೋಲ್ ನೋಡಿ ಎಂಜಾಯ್ ಮಾಡಿ.,...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.