
ಹೈದರಾಬಾದ್ (ಏ.15): ವಾರಂಗಲ್’ನಲ್ಲಿ ನಡೆಯಲಿರುವ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್’ಎಸ್) ಪಕ್ಷದ ಸಂಸ್ಥಾಪನಾ ದಿನಾಚರಣೆಗೆ ಹಣ ಸಂಗ್ರಹಿಸಿಲು ಟಿಆರ್ಎಸ್ ನಾಯಕರು ಕೂಲಿ ಮಾಡುತ್ತಿದ್ದಾರೆ.
ಸ್ವತಃ ಸಿಎಂ ಚಂದ್ರಶೇಖರ್ ರಾವ್ ಕೂಡ ಕೂಲಿ ಮಾಡಿ ಪಕ್ಷಕ್ಕೆ ಹಣ ಸಂಗ್ರಹಿಸಲಿದ್ದಾರೆ. ಈ ಸಂಬಂಧ ನಿನ್ನೆ ಸಿಎಂ ಪುತ್ರ ಸಚಿವ ಕೆ.ಟಿ.ರಾಮರಾವ್ ವಾರಂಗಲ್’ನ ಐಸ್’ಕ್ರೀಂ ಮಳಿಗೆಯಲ್ಲಿ ಕೆಲಸ ಮಾಡಿದ್ದಾರೆ. ಅವರು ಮಾಡಿದ ಕೆಲಸಕ್ಕೆ ಸಿಕ್ಕ ಕೂಲಿ ಬರೋಬ್ಬರಿ 7.5 ಲಕ್ಷ ರೂ.ಗಳು.
ನಾರಾಯಣಪೇಟೆ ಎಪಿಎಂಸಿಯಲ್ಲಿ ಶಾಸಕ ರಾಜಣ್ಣ ಮೂಟೆ ಹೊತ್ತು, ಕಸ ಗುಡಿಸಿದ್ದರೆ, ರಂಗಾರೆಡ್ಡಿ ಜಿಲ್ಲೆ ಶಹಬಾದ್’ನಲ್ಲಿ ಎಂಎಲ್’ಸಿ ನರೇಂದ್ರ ರೆಡ್ಡಿ ರಸ್ತೆ ಬದಿ ಕಸ ಗುಡಿಸಿ ಕೂಲಿ ಕೆಲಸ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.