ಸಿಎಂ ಸಿದ್ದರಾಮಯ್ಯರಿಂದ ಅ.05 ರಂದು ವಾಲ್ಮೀಕಿ ತಪೋವನ ಲೋಕಾರ್ಪಣೆ

Published : Sep 28, 2017, 05:33 PM ISTUpdated : Apr 11, 2018, 12:58 PM IST
ಸಿಎಂ ಸಿದ್ದರಾಮಯ್ಯರಿಂದ ಅ.05 ರಂದು ವಾಲ್ಮೀಕಿ ತಪೋವನ ಲೋಕಾರ್ಪಣೆ

ಸಾರಾಂಶ

ಇದೇ ಅಕ್ಟೋಬರ್ 5  ರಂದು ಶಾಸಕರ ಭವನದ ಎದುರು ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ತಪೋವನ ಲೋಕಾರ್ಪಣೆ ಮಾಡಲಿದ್ದಾರೆ.  

ಬೆಂಗಳೂರು (ಸೆ.28): ಇದೇ ಅಕ್ಟೋಬರ್ 5  ರಂದು ಶಾಸಕರ ಭವನದ ಎದುರು ಸಿಎಂ ಸಿದ್ದರಾಮಯ್ಯ ವಾಲ್ಮೀಕಿ ತಪೋವನ ಲೋಕಾರ್ಪಣೆ ಮಾಡಲಿದ್ದಾರೆ.  

ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಈ ವಿಚಾರ ತಿಳಿಸಿದ ಸಚಿವ ಆಂಜನೇಯ, ಅಂದೇ ವಿಧಾನಸೌಧದ ಮುಂಭಾಗದಲ್ಲಿ ವಾಲ್ಮೀಕಿ ಜಯಂತಿ ಆಚರಣೆ ನಡೆಯಲಿದೆ ಎಂದೂ ಹೇಳಿದರು.  ಇನ್ನು, ಅಕ್ಟೋಬರ್ 1 ರಂದು ಹರಿಹರದಲ್ಲಿ ಬಿ. ಕೃಷ್ಣಪ್ಪ ಭವನ ಲೋಕಾರ್ಪಣೆಯಾಗಲಿದ್ದು, ಸಿಎಂ ಸಿದ್ದರಾಮಯ್ಯನವರೇ ಈ ಭವನ ಲೋಕಾರ್ಪಣೆ ಮಾಡಲಿದ್ದಾರೆ ಅಂತ ಸಚಿವರು ತಿಳಿಸಿದರು.  ಅ.8  ರಂದು ಸಿಎಂ ಸಿದ್ದರಾಮಯ್ಯ ಭೋವಿ ಅಭಿವೃದ್ಧಿ ನಿಗಮವನ್ನೂ ಲೋಕಾರ್ಪಣೆ ಮಾಡಲಿದ್ದಾರೆ ಅಂತ ಆಂಜನೇಯ ಹೇಳಿದರು.  ಬಾಬಾ ಸಾಹೇಬ್ ಅಂಬೇಡ್ಕರ್ ಇಂದು ಬೌದ್ಧ ಧರ್ಮ ಸ್ವೀಕರಿಸಿದ ದಿನವಾದ ಹಿನ್ನಲೆಯಲ್ಲಿ ನಾಗಪುರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ 500 ಜನರನ್ನು 10 ಬಸ್​ಗಳಲ್ಲಿ ಕಳಿಸಿರೋದಾಗಿಯೂ ಸಚಿವರು ಮಾಹಿತಿ ನೀಡಿದರು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳ ಬಳಿ, 6 ಹೊಸ ಬಿಎಂಟಿಸಿ ಬಸ್ ತಂಗುದಾಣಗಳ ಸ್ಥಾಪನೆ!
ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್‌ ಲೈಫ್‌ ಇನ್ಶುರೆನ್ಸ್‌ ಪಾಲು ಮಾರಾಟಕ್ಕೆ ನಿರ್ಧಾರ!