ಅಧಿಕಾರಿಗಳ ಜೊತೆ ಹೇಗಿರಬೇಕು ಅನ್ನೋದು ಗೊತ್ತಿಲ್ವಾ? ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡ ಸಿಎಂ

Published : Oct 11, 2017, 07:45 PM ISTUpdated : Apr 11, 2018, 12:42 PM IST
ಅಧಿಕಾರಿಗಳ ಜೊತೆ ಹೇಗಿರಬೇಕು ಅನ್ನೋದು ಗೊತ್ತಿಲ್ವಾ? ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡ ಸಿಎಂ

ಸಾರಾಂಶ

ರಾಜೇಂದ್ರ ಕಟಾರಿಯಾಗೆ ಶಾಸಕ ಶಿವಮೂರ್ತಿ ನಾಯಕ್ ಧಮ್ಕಿ ಹಾಕಿರುವ ವಿಚಾರವಾಗಿ ಮಾಯಕೊಂಡ ಶಾಸಕರಿಗೆ ಸಿಎಂ ಫುಲ್​ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಬೆಂಗಳೂರು (ಅ.11): ರಾಜೇಂದ್ರ ಕಟಾರಿಯಾಗೆ ಶಾಸಕ ಶಿವಮೂರ್ತಿ ನಾಯಕ್ ಧಮ್ಕಿ ಹಾಕಿರುವ ವಿಚಾರವಾಗಿ ಮಾಯಕೊಂಡ ಶಾಸಕರಿಗೆ ಸಿಎಂ ಫುಲ್​ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಅಧಿಕಾರಿಗಳ ಜೊತೆ ಹೇಗಿರಬೇಕು ಅನ್ನೋದು ಗೊತ್ತಿಲ್ವಾ? ಇಂಥ ನಾನ್ ಸೆನ್ಸ್ ಕೆಲಸ ಎಲ್ಲ ಮಾಡಬೇಡ. ಅಧಿಕಾರಿಗಳಿಗೆ ಬೈಯೋದು ಅಂದ್ರೆ ಏನು ಅಂದುಕೊಂಡಿದ್ದೀಯಾ? ಹೆಚ್ಚು ಕಡಿಮೆ ಆದರೆ ನಿನ್ನನ್ನು ಜೈಲಿಗೆ ಕಳಿಸ್ತಾರೆ  ಹುಷಾರ್ .  ಎಲೆಕ್ಷನ್ ಟೈಮ್ ನಲ್ಲಿ ಇಂತಹದ್ದೆಲ್ಲಾ ಮಾಡ್ಕೊಂಡ್ರೆ ಬಿ-ಫಾರಂ ಸಿಗಲ್ಲ ತಿಳ್ಕೋ ಎಂದು  ರೇಗಿದ್ರು. ಇದಕ್ಕೆ ಶಿವಮೂರ್ತಿ ಹಾಗಲ್ಲ ಸಾರ್ ಅಂತ ಸಮಜಾಯಿಷಿ ನೀಡಲು ಮುಂದಾದರೂ ಸಿಎಂ ಕೇಳಿಸಿಕೊಳ್ಳಲಿಲ್ಲ.  ಇನ್ನು  ಸಿಎಂ ಕೋಪ ತಣ್ಣಗಾಗದ್ದನ್ನು ನೋಡಿ ಸಿಎಂ ನಿವಾಸದಿಂದ ಶಿವಮೂರ್ತಿ ನಾಯಕ್ ಜಾಗ ಖಾಲಿ ಮಾಡಿದರು.

ರಾಜ್ಯದಲ್ಲಿ ಎಸ್ಸಿ ಎಸ್ಟಿ ವರ್ಗದ ಜನಾಂಗಕ್ಕೆ ಗಣಿ ವಿಚಾರದಲ್ಲಿ ಭಾರಿ ಅನ್ಯಾಯವಾಗಿದೆ ಎಂದು ಐಎಎಸ್ ಅಧಿಕಾರಿಗೆ  ಶಿವಮೂರ್ತಿ ನಾಯ್ಕ್ ಧಮ್ಕಿ ಹಾಕಿದ್ದಾರೆ. ರಾಜ್ಯದಲ್ಲಿ ಎಸ್ಸಿ ಎಸ್ಟಿ ವರ್ಗದ ಜನಾಂಗಕ್ಕೆ ಗಣಿ ವಿಚಾರದಲ್ಲಿ ಭಾರಿ ಅನ್ಯಾಯವಾಗಿದೆ ಅವರ ಬಗ್ಗೆ ನ್ಯಾಯ ಕೇಳಿದ್ದು ತಪ್ಪಾ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೊಂಡಿ ಬೀಚ್‌ನಲ್ಲಿ ಯಹೂದಿಯರ ಹಬ್ಬದಲ್ಲಿ ರಕ್ತಪಾತಗೈದ ಹಂತಕ ಭಾರತೀಯ: ಹೈದರಾಬಾದ್ ಓಲ್ಡ್ ಸಿಟಿಯಿಂದ ವಲಸೆ ಹೋದವ
'ಮಾದೇಶ್ವರ ದಯಬಾರದೆ..' ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌ ಹಾಡು!