
ಬೆಂಗಳೂರು (ಅ.11): ಪೌರಕಾರ್ಮಿಕರ ವಿದೇಶಕ್ಕೆ ಕಳುಹಿಸುವ ತೀರ್ಮಾನ ಮಾಡಿದ ಮೊದಲ ಸರ್ಕಾರ ನಮ್ಮದು. ಹಿಂದೆ ಯಾವ ಸರ್ಕಾರಗಳೂ ಪೌರಕಾರ್ಮಿಕರ ವಿದೇಶಕ್ಕೆ ಕಳುಹಿಸಿಲ್ಲ ಎಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನೀವೆಲ್ಲ ಕನಸು ಕಾಣದೇ ಸಿಂಗಾಪುರ್ ಪ್ರವಾಸ ಮಾಡ್ತಿದ್ದೀರಿ? ಯಾರಾದರೂ ಕನಸು ಕಂಡಿದ್ದಿರಾ?ಬೇರೆ ಯಾರಾದ್ರೂ ನಿಮ್ಮನ್ನು ಕಳುಹಿಸಿದ್ದಾರಾ? ಅಂತ ಪೌರ ಕಾರ್ಮಿಕರ ಸಿಎಂ ಪ್ರಶ್ನಿಸಿದ್ದಾರೆ. ಸಿಎಂ ಪ್ರಶ್ನೆಗೆ ಉತ್ಸುಕತೆಯಿಂದ ಪೌರಕಾರ್ಮಿಕರು ಇಲ್ಲ ಎಂದಿದ್ದಾರೆ. ಈಗ ಬಿಬಿಎಂಪಿ ಪೌರಕಾರ್ಮಿಕರ 6ನೇ ತಂಡ ಸಿಂಗಾಪುರ ಪ್ರವಾಸ ಕೈಗೊಳ್ಳಲಿದೆ. ಅ. 24ರಂದು ಪೌರ ಕಾರ್ಮಿಕರು ಸಿಂಗಾಪುರಕ್ಕೆ ತೆರಳುತ್ತಿದ್ದಾರೆ. ಘನ ತ್ಯಾಜ್ಯ ನಿರ್ವಹಣೆಯ ವಿವಿಧ ವಿಧಾನಗಳ ಬಗ್ಗೆ ಅಧ್ಯಯನಕ್ಕೆ ಪೌರ ಕಾರ್ಮಿಕರು ಸಿಂಗಾಪುರ ಪ್ರವಾಸ ಹೋಗುತ್ತಿದ್ದಾರೆ. ಅ. 24ರಿಂದ ನಾಲ್ಕು ದಿನಗಳ ಕಾಲ 39 ಪೌರಕಾರ್ಮಿಕರು, ಮೂವರು ಅಧಿಕಾರಿಗಳು ಸಿಂಗಾಪುರ ಪ್ರವಾಸ ಕೈಗೊಳ್ಳಲಿದ್ದಾರೆ. ಅವರಿಗೆ ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಬೀಳ್ಕೊಡುಗೆ ನೀಡಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.