ಕಲ್ಲಡ್ಕ ಶಾಲೆಗೆ ಯಾಕೆ ಕೊಲ್ಲೂರು ದೇವಳದ ಊಟ ಕೊಡಬೇಕು? ಸಿಎಂ ಪ್ರಶ್ನೆ

Published : Jan 08, 2018, 04:32 PM ISTUpdated : Apr 11, 2018, 01:11 PM IST
ಕಲ್ಲಡ್ಕ ಶಾಲೆಗೆ ಯಾಕೆ ಕೊಲ್ಲೂರು ದೇವಳದ ಊಟ ಕೊಡಬೇಕು? ಸಿಎಂ ಪ್ರಶ್ನೆ

ಸಾರಾಂಶ

ಕಲ್ಲಡ್ಕ ಅವರದ್ದು ಖಾಸಗಿ ಶಾಲೆ, ಸರ್ಕಾರಿ ಶಾಲೆ ಅಲ್ಲ, ಅನುದಾನಿತವೂ ಅಲ್ಲ, ಅವರಿಗೆ ಯಾಕೆ ಕೊಲ್ಲೂರು ದೇವಳದ ಊಟ ಕೊಡಬೇಕು ? ಸಿಎಂ ಪ್ರಶ್ನಿಸಿದ್ದಾರೆ.

ಬೆಂಗಳೂರು (ಜ.08): ಕಲ್ಲಡ್ಕ ಅವರದ್ದು ಖಾಸಗಿ ಶಾಲೆ, ಸರ್ಕಾರಿ ಶಾಲೆ ಅಲ್ಲ, ಅನುದಾನಿತವೂ ಅಲ್ಲ, ಅವರಿಗೆ ಯಾಕೆ ಕೊಲ್ಲೂರು ದೇವಳದ ಊಟ ಕೊಡಬೇಕು ? ಸಿಎಂ ಪ್ರಶ್ನಿಸಿದ್ದಾರೆ.

ಏನಿದು ವಿಚಾರ?

ಆರ್'ಎಸ್ಎಸ್  ಮುಖಂಡ ಕಲ್ಲಡ್ಕ ಪ್ರಭಾಕರ್​ ಭಟ್​ ಒಡೆತನದ ಶಾಲೆಗಳಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಪ್ರಭಾಕರ್ ಭಟ್ ಒಡೆತನದ ಶಾಲೆಗಳಾದ ಶ್ರೀರಾಮಕೇಂದ್ರ, ಶ್ರೀದೇವಿ ವಿದ್ಯಾಕೇಂದ್ರದ ದತ್ತು ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ.

ಈ ವಿದ್ಯಾಸಂಸ್ಥೆಗಳನ್ನು ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ವತಿಯಿಂದ ಕಲ್ಲಡ್ಕ ಪ್ರಭಾಕರ್ ಭಟ್ ದತ್ತು ಪಡೆದಿದ್ದರು. ಆದರೀಗ ಹಿಂದೂ ಧಾರ್ಮಿಕ ದತ್ತಿ ಅಧಿನಿಯಮದಂತೆ ಖಾಸಗಿ ಶಾಲೆ ದತ್ತು ಪಡೆಯಲು ಅಧಿಕಾರವಿಲ್ಲ. ನಿಯಮದ ಪ್ರಕಾರ ದೇವಸ್ಥಾನಕ್ಕೆ ನಷ್ಟ ಆಗುತ್ತೆ ಅನ್ನೋ ಕಾರಣ ನೀಡಿರುವ ರಾಜ್ಯ ಸರ್ಕಾರ ಈ ದತ್ತು ಆದೇಶವನ್ನು ರದ್ದುಗೊಳಿಸಿದೆ.

ಇನ್ನು ಇಂದು ಬೈಂದೂರಿನಲ್ಲಿ  ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಕೊಲ್ಲೂರು ದೇವಸ್ಥಾನದಿಂದ ಊಟ ಪೂರೈಕೆ ಮಾಡಿರುವ ವಿಚಾರವಾಗಿ ಮಾತನಾಡಿದ ಸಿಎಂ, ಈ ವಿಷಯ ನಂಗೆ ಗೊತ್ತಿಲ್ಲ, ಎಲ್ಲಿಂದ ತಂದರೂ ಊಟ ಊಟವೇ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನ್ಯಾಯಾಂಗ ಬೆದರಿಸಿ ಶತಮಾನಗಳ ಕಾರ್ತಿಕ ದೀಪ ಸಂಪ್ರದಾಯ ಮುಗಿಸಲು ಡಿಎಂಕೆ ಯತ್ನ ಬಹಿರಂಗ
ಕೇಂದ್ರದಿಂದ MNREGA ಹೆಸರು ಬದಲಾವಣೆ, ಹೊಸ ನಿಯಮಗಳು ಜಾರಿ, ಕೆಲಸದ ಅವಧಿ, ಕನಿಷ್ಟ ವೇತನ ಹೆಚ್ಚಳ, ವಿವರವಾಗಿ ತಿಳಿಯಿರಿ