ಮೋದಿಗೆ ಸಿದ್ದು ಪತ್ರ: ಗೋ ಅಧಿಸೂಚನೆಗೆ ವಿರೋಧ

Published : Jun 10, 2017, 02:17 PM ISTUpdated : Apr 11, 2018, 01:11 PM IST
ಮೋದಿಗೆ ಸಿದ್ದು ಪತ್ರ: ಗೋ ಅಧಿಸೂಚನೆಗೆ ವಿರೋಧ

ಸಾರಾಂಶ

‘ಕೇಂದ್ರ ಜಾರಿಗೊಳಿಸಿರುವ 2017ರ ಪ್ರಾಣಿ ಹಿಂಸೆ ಮತ್ತು ಜಾನುವಾರು ಮಾರಾಟ ನಿಯಂತ್ರಣ ಕಾಯ್ದೆಯ ಅಧಿಸೂಚನೆಯು, ಸಂವಿಧಾನದ ವಿಧಿ 301 ಹಾಗೂ 302 ಮತ್ತು ಅನುಸೂಚಿ 7ರಲ್ಲಿ ಕಲ್ಪಿಸಲಾಗಿರುವ ಜಾನುವಾರುಗಳ ಮುಕ್ತ ಮಾರಾಟ ವ್ಯವಸ್ಥೆಗೆ ವಿರುದ್ಧವಾಗಿದ್ದು, 1964ರ ಕರ್ನಾಟಕ ಗೋಹತ್ಯೆ ಮತ್ತು ಜಾನುವಾರುಗಳ ಹತ್ಯೆ ಕಾಯ್ದೆಗೆ ಕೂಡ ವ್ಯತಿರಿಕ್ತವಾಗಿದೆ. ಹೀಗಾಗಿ ಸಂವಿಧಾನದ ವಿಧಿ 249 ಮತ್ತು 250ರ ಅನ್ವಯ ಕೇಂದ್ರ ಸರ್ಕಾರದ ಕಾಯ್ದೆ ರಾಜ್ಯದ ಕಾಯ್ದೆಗಳಿಗೆ ಅನ್ವಯವಾಗಲ್ಲ' ಎಂದು ಆಕ್ಷೇಪ ಸಲ್ಲಿಸಿದ್ದಾರೆ.

ಬೆಂಗಳೂರು: 'ಜಾನುವಾರು ಪೇಟೆಗಳಲ್ಲಿ ಹತ್ಯೆಯ ಉದ್ದೇಶಕ್ಕೆ ಪಶುಗಳನ್ನು ಮಾರಾಟ ಮಾಡಬಾರದು' ಎಂಬ ಕೇಂದ್ರ ಸರ್ಕಾರದ ಅಧಿಸೂಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

‘ಕೇಂದ್ರ ಜಾರಿಗೊಳಿಸಿರುವ 2017ರ ಪ್ರಾಣಿ ಹಿಂಸೆ ಮತ್ತು ಜಾನುವಾರು ಮಾರಾಟ ನಿಯಂತ್ರಣ ಕಾಯ್ದೆಯ ಅಧಿಸೂಚನೆಯು, ಸಂವಿಧಾನದ ವಿಧಿ 301 ಹಾಗೂ 302 ಮತ್ತು ಅನುಸೂಚಿ 7ರಲ್ಲಿ ಕಲ್ಪಿಸಲಾಗಿರುವ ಜಾನುವಾರುಗಳ ಮುಕ್ತ ಮಾರಾಟ ವ್ಯವಸ್ಥೆಗೆ ವಿರುದ್ಧವಾಗಿದ್ದು, 1964ರ ಕರ್ನಾಟಕ ಗೋಹತ್ಯೆ ಮತ್ತು ಜಾನುವಾರುಗಳ ಹತ್ಯೆ ಕಾಯ್ದೆಗೆ ಕೂಡ ವ್ಯತಿರಿಕ್ತವಾಗಿದೆ. ಹೀಗಾಗಿ ಸಂವಿಧಾನದ ವಿಧಿ 249 ಮತ್ತು 250ರ ಅನ್ವಯ ಕೇಂದ್ರ ಸರ್ಕಾರದ ಕಾಯ್ದೆ ರಾಜ್ಯದ ಕಾಯ್ದೆಗಳಿಗೆ ಅನ್ವಯವಾಗಲ್ಲ' ಎಂದು ಆಕ್ಷೇಪ ಸಲ್ಲಿಸಿದ್ದಾರೆ.

‘ರಾಜ್ಯದ ಕಾಯ್ದೆ ಅನ್ವಯ 12 ವರ್ಷ ಮೀರಿದ ಜಾನುವಾರುಗಳನ್ನು ಮಾರಾಟ ಮಾಡಲು ಅವಕಾಶವಿದೆ. ಕೇಂದ್ರ ಜಾರಿಗೊಳಿಸಿರುವ ಹೊಸ ಕಾಯ್ದೆಯಿಂದ ರೈತರು ಅಗತ್ಯ ದಾಖಲಾತಿಗಳೊಂದಿಗೆ ಜಾನುವಾರುಗಳು ಖರೀದಿ, ಮಾರದೇ ಸಾಧ್ಯವೇ ಇಲ್ಲ. ಇದರಿಂದ ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೆಲ್ಫಿ& ಶೇಕ್‌ಹ್ಯಾಂಡ್‌ಗೆ 10 ಲಕ್ಷ : ಇಂಡಿಯಾ ಟೂರ್ ಮಾಡಿದ ಮೆಸ್ಸಿಗೆ ಆಯೋಜಕರು ಕೊಟ್ಟಿದ್ದು ಎಷ್ಟು ಕೋಟಿ
ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ