
ವಿಧಾನಸಭೆ: ‘ರೀ ಮತ್ತೆ ನಾನೆ ಸಿಎಂ ಆಗುತ್ತೇನೆ. ಮತ್ತೆ ಚಾಮರಾಜನಗರಕ್ಕೆ ಹೋಗುತ್ತೇನೆ’ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ಅವಧಿಗೂ ತಾವೇ ಸಿಎಂ ಎಂಬುದನ್ನು ಪುನರುಚ್ಚರಿಸಿದರು.
ಮೌಢ್ಯ ನಿಷೇಧ ಕಾಯ್ದೆ ಕುರಿತು ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡುವಾಗ ಕಾಯ್ದೆ ತರಲು ಹೊರಟಿರುವ ಸಿಎಂ, ಕಾಗೆ ಕುಳಿತ ಕಾರಣಕ್ಕೆ ಕಾರ್ ಬದಲಾವಣೆ ಮಾಡಿದರು ಎಂದು ರೇಗಿಸಿದರು. ಆಗ ಸಿದ್ದರಾಮಯ್ಯ, ರವೀ, ನಾನು ಕಾಗೆ ಕೂರುವ ಮುನ್ನವೇ ಹೊಸ ಕಾರು ತಗೊಂಡಿದ್ದೆ. ಈಗಲೂ ಬೇಕಿದ್ದರೆ ನನ್ನ ಕಾರ್ ಮೇಲೆ 20 ಕಾಗೆ ತಂದು ಬಿಡು ಎಂದರು.
ಆಗ ಜಗದೀಶ್ ಶೆಟ್ಟರ್, ನಾನು ಸಿಎಂ ಆದ ಬಳಿಕ ಮೂರು ಸಾರಿ ಚಾಮರಾಜನಗರಕ್ಕೆ ಹೋಗಿದ್ದೆ ಎಂದರು. ಆಗ ಸಿದ್ದರಾಮಯ್ಯ ಅವರು, ರೀ ನಾನು ಈಗಾಗಲೇ 10 ಸಲ ಹೋಗಿದ್ದೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.