
ವಿಜಯಪುರ: ಒಂದು ಕಡೆ ವಿಜಯಪುರದಲ್ಲಿ ಬಿಎಸ್ ಯಡಿಯೂರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗಿದರೆ, ಇನ್ನೊಂದೆಡೆ ಮಂಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಬಿಎಸ್ವೈ ಹರಿಹಾಯ್ದಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಿಸುವ ವಿಚಾರ ಪ್ರಧಾನಿ ಎದುರು ಯಡಿಯೂರಪ್ಪ ಮಾತಲಾಡಲಾಗದೇ ತುಟಿ ಪಿಟಕ್ ಎನ್ನಲಿಲ್ಲ. ಸಾಲ ಮನ್ನಾ ಮಾಡಿ ಎಂದು ವಿಧಾನಸೌಧ ಮುತ್ತಿಗೆ ಹಾಕುತ್ತೇನೆ ಎನ್ನುವ ಯಡಿಯೂರಪ್ಪ ಲೋಕಸಭೆ ಮುತ್ತಿಗೆ ಹಾಕಿ ತೋರಿಸಲಿ, ಎಂದು ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.
ರೈತರ ಸಾಲ ಮನ್ನಾ ಎನ್ನುವುದನ್ನು ಯಡಿಯೂರಪ್ಪ ಲಾಲಿ ಪಾಪ್ ಮಾಡಿದ ಹಾಗೆ ಮಾಡಿದ್ದಾರೆ. ರೈತರ ಬಗ್ಗೆ ಹಿತ ಯಡಿಯೂರಪ್ಪಗೆ ಏನೂ ಗೊತ್ತು. ನಾನು 80 ರ ದಶಕದಿಂದಲೇ ಹಸಿರು ಶಾಲು ಹೊದ್ದುಕೊಂಡು ಹೋರಾಟ ಮಾಡಿಕೊಂಡು ಬಂದವನು, ಎಂದು ಸಿಎಂ ಹೇಳಿದ್ದಾರೆ.
ಅಚ್ಚೆ ದಿನ್ ಆಯೆಂಗೆ ಎಂದು ಮೋದಿ ಹೇಳಿದ್ರು, ಬಂತೇನ್ರಿ ಅಚ್ಚೆ ದಿನ್ ಎಂದು ಜನರಿಗೆ ಕೇಳಿದ ಸಿಎಂ, ಅಚ್ಚೆ ದಿನ್ ಆಗಿದ್ದು ಅಂಬಾನಿ, ಅದಾನಿ, ಜಯ್ ಷಾ, ರಾಮದೇವ್ ಬಾಬಾಗೆ ಮಾತ್ರ ಎಂದು ವ್ಯಂಗ್ಯವಾಡಿದ್ದಾರೆ.
ಶೀಘ್ರದಲ್ಲೇ ನೇಕಾರರು ಮತ್ತು ಮೀನುಗಾರರ ಸಾಲ ಮನ್ನಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಸಂದರ್ಭದಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.