ರೈತರ ಸಾಲ ಮನ್ನಾ ಮಾಡಿಸಲು ಲೋಕಸಭೆಗೆ ಮುತ್ತಿಗೆ ಹಾಕಿ ತೋರಿಸಲಿ: ಯಡಿಯೂರಪ್ಪಗೆ ಸಿಎಂ ಸವಾಲ್

By Suvarna Web DeskFirst Published Nov 10, 2017, 4:52 PM IST
Highlights

ಒಂದು ಕಡೆ ವಿಜಯಪುರದಲ್ಲಿ ಬಿಎಸ್​ ಯಡಿಯೂರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗಿದರೆ, ಇನ್ನೊಂದೆಡೆ ಮಂಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಬಿಎಸ್​ವೈ ಹರಿಹಾಯ್ದಿದ್ದಾರೆ.

ವಿಜಯಪುರ: ಒಂದು ಕಡೆ ವಿಜಯಪುರದಲ್ಲಿ ಬಿಎಸ್​ ಯಡಿಯೂರಪ್ಪ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗಿದರೆ, ಇನ್ನೊಂದೆಡೆ ಮಂಗಳೂರಿನಲ್ಲಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ಬಿಎಸ್​ವೈ ಹರಿಹಾಯ್ದಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಿಸುವ ವಿಚಾರ ಪ್ರಧಾನಿ ಎದುರು ಯಡಿಯೂರಪ್ಪ ಮಾತಲಾಡಲಾಗದೇ ತುಟಿ ಪಿಟಕ್ ಎನ್ನಲಿಲ್ಲ. ಸಾಲ ಮನ್ನಾ ಮಾಡಿ ಎಂದು ವಿಧಾನಸೌಧ ಮುತ್ತಿಗೆ ಹಾಕುತ್ತೇನೆ ಎನ್ನುವ ಯಡಿಯೂರಪ್ಪ ಲೋಕಸಭೆ ಮುತ್ತಿಗೆ ಹಾಕಿ ತೋರಿಸಲಿ, ಎಂದು ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.

ರೈತರ ಸಾಲ ಮನ್ನಾ ಎನ್ನುವುದನ್ನು ಯಡಿಯೂರಪ್ಪ ಲಾಲಿ ಪಾಪ್ ಮಾಡಿದ ಹಾಗೆ ಮಾಡಿದ್ದಾರೆ. ರೈತರ ಬಗ್ಗೆ ಹಿತ ಯಡಿಯೂರಪ್ಪಗೆ ಏನೂ ಗೊತ್ತು. ನಾನು 80 ರ ದಶಕದಿಂದಲೇ ಹಸಿರು ಶಾಲು ಹೊದ್ದುಕೊಂಡು ಹೋರಾಟ ಮಾಡಿಕೊಂಡು ಬಂದವನು, ಎಂದು ಸಿಎಂ ಹೇಳಿದ್ದಾರೆ.

ಅಚ್ಚೆ ದಿನ್ ಆಯೆಂಗೆ ಎಂದು ಮೋದಿ ಹೇಳಿದ್ರು, ಬಂತೇನ್ರಿ ಅಚ್ಚೆ ದಿನ್ ಎಂದು ಜನರಿಗೆ ಕೇಳಿದ ಸಿಎಂ,  ಅಚ್ಚೆ ದಿನ್ ಆಗಿದ್ದು ಅಂಬಾನಿ, ಅದಾನಿ, ಜಯ್ ಷಾ, ರಾಮದೇವ್ ಬಾಬಾಗೆ ಮಾತ್ರ ಎಂದು ವ್ಯಂಗ್ಯವಾಡಿದ್ದಾರೆ.

ಶೀಘ್ರದಲ್ಲೇ ನೇಕಾರರು ಮತ್ತು ಮೀನುಗಾರರ ಸಾಲ ಮನ್ನಾ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ  ಸಂದರ್ಭದಲ್ಲಿ ಹೇಳಿದ್ದಾರೆ.

click me!