ನಮ್ಮ ಸರ್ಕಾರದ ವಿರುದ್ಧ ದಾಖಲೆಗಳಿದ್ದರೆ ಬಹಿರಂಗಗೊಳಿಸಲಿ; ಮೋದಿಗೆ ಸಿದ್ದು ಸವಾಲು

Published : Feb 27, 2018, 03:39 PM ISTUpdated : Apr 11, 2018, 01:11 PM IST
ನಮ್ಮ ಸರ್ಕಾರದ ವಿರುದ್ಧ ದಾಖಲೆಗಳಿದ್ದರೆ ಬಹಿರಂಗಗೊಳಿಸಲಿ; ಮೋದಿಗೆ ಸಿದ್ದು ಸವಾಲು

ಸಾರಾಂಶ

ಪ್ರಧಾನಿ ಮೋದಿ ದೇಶವನ್ನು ಚೌಕಿದಾರನಾಗಿ ಕಾಯುತ್ತೇನೆ ಎಂದಿದ್ದರು.  ಆದರೆ ವಿಜಯ್ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ ಹೇಗೆ ದೇಶ ಬಿಟ್ರು?  ದೇಶದ  ಕಾವಲುಗಾರನಾಗಿ ಮೋದಿ ಕಾದಿದ್ದರೆ  ದೇಶ ಬಿಟ್ಟು ಹೇಗೆ ಹೋಗುತ್ತಿದ್ದರು ಎಂದು ಸಿಎಂ ಸಿದ್ದರಾಮಯ್ಯ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ರಾಯಚೂರು (ಫೆ. 27):  ಪ್ರಧಾನಿ ಮೋದಿ ದೇಶವನ್ನು ಚೌಕಿದಾರನಾಗಿ ಕಾಯುತ್ತೇನೆ ಎಂದಿದ್ದರು.  ಆದರೆ ವಿಜಯ್ ಮಲ್ಯ, ಲಲಿತ್ ಮೋದಿ, ನೀರವ್ ಮೋದಿ ಹೇಗೆ ದೇಶ ಬಿಟ್ರು?  ದೇಶದ  ಕಾವಲುಗಾರನಾಗಿ ಮೋದಿ ಕಾದಿದ್ದರೆ  ದೇಶ ಬಿಟ್ಟು ಹೇಗೆ ಹೋಗುತ್ತಿದ್ದರು ಎಂದು ಸಿಎಂ ಸಿದ್ದರಾಮಯ್ಯ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  

ಬಿಜೆಪಿ ಅವಧಿಯಲ್ಲಿ ಸಾಲು ಸಾಲು ಸಚಿವರು ಜೈಲಿಗೆ ಹೋಗಿದ್ದರು.  ಆದರೂ ಪ್ರಧಾನಿ ನರೇಂದ್ರ ಮೋದಿ ನಮ್ಮನ್ನ ಭ್ರಷ್ಟ ಎನ್ನುತ್ತಾರೆ.  ನಮ್ಮ ಸರ್ಕಾರದ ಭ್ರಷ್ಟಾಚಾರದ ದಾಖಲೆಯಿದ್ದರೆ ಬಹಿರಂಗಪಡಿಸಲಿ ಎಂದು  ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಬಹಿರಂಗ ಸವಾಲು ಹಾಕಿದ್ದಾರೆ. 

ಒಬ್ಬರು ಮಣ್ಣಿನ ಮಗ, ಮತ್ತೊಬ್ಬರು ರೈತರ ಮಗ ಅಂತೆ.  ಹಾಗಾದ್ರೆ ನಾವ್ಯಾರ ಮಕ್ಕಳು ಎಂದು ಸಿಎಂ ವ್ಯಂಗ್ಯವಾಡಿದ್ದಾರೆ.  ರೈತರು ಗೊಬ್ಬರ ಕೇಳಿದ್ರೆ ರೈತರ ಮಗ ಗೋಲಿಬಾರ್ ಮಾಡಿದ್ದರು ಎಂದು ಬಿಎಸ್’ವೈ  ವಿರುದ್ಧ ವಾಗ್ದಾಳಿ ನಡೆಸಿದರು. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು
ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!