ಬೆಂಗಳೂರು(ಸೆ.26): ಇತ್ತೀಚಿಗಷ್ಟೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ ಜಾರ್ಜ್ಗೆ ಶೀಘ್ರದಲ್ಲೇ ಕ್ಲಿನ್ ಚಿಟ್ ದೊರೆತು ಇಂದು ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೆಲವು ಪ್ರಕರಣಗಳಿಗೆ ಅದೆಷ್ಟೋ ವರ್ಷಗಳಾದರೂ ಕ್ಲೀನ್ ಚಿಟ್ ದೊರಕುವುದಿಲ್ಲ. ಕೆ.ಜೆ ಜಾರ್ಜ್ಗೆ ಕೇವಲ 3 ತಿಂಗಳಲ್ಲೇ ಸಿಐಡಿ ಕ್ಲಿನ್ ಚಿಟ್ ನೀಡಿದೆ. ಇನ್ನೂ ಇದೇ ರೀತಿ ತ್ವರಿತ ಗತಿಯಲ್ಲಿ ಕೆಲವು ಪ್ರಕರಣಗಳಿಗೆ ಕ್ಲೀನ್ ಚಿಟ್ ದೊರೆತಿದೆ.
ಶೀಘ್ರ ಕ್ಲೀನ್ ಚಿಟ್ ಸಿಕ್ಕ ಕೇಸ್ಗಳು
1) ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ - ಪ್ರಕರಣ ದಾಖಲಾದ ಮೂರೇ ತಿಂಗಳಲ್ಲಿ. ಕೆ.ಜೆ ಜಾರ್ಜ್ ಸೇರಿ ಮೂವರಿಗೆ ಕ್ಲೀನ್ ಚಿಟ್
2) ಅತ್ಯಾಚಾರ ಆರೋಪ ಪ್ರಕರಣ - ಒಂದು ವರ್ಷದ ನಂತರ ರಾಘೇಶ್ವರ ಶ್ರೀಗಳಿಗೆ ಕ್ಲೀನ್ಚಿಟ್
3) ಅರವಿಂದ್ ಜಾದವ್ - ಅಕ್ರಮ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಒಂದೇ ವಾರದಲ್ಲಿ ಸಜಿಲ್ಲಾಧಿಕಾರಿಯಿಂದ ಕ್ಲೀನ್ ಚಿಟ್
4) ಜವಾಹರ್ ನೆಹರು ವಿವಿಯಲ್ಲಿ ದೇಶವಿರೋಧಿ ಘೋಷಣೆ ಪ್ರಕರಣ- ದೆಹಲಿ ಸರ್ಕಾರದಿಂದ ಒಂದೇ ತಿಂಗಳಲ್ಲಿ ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಗೆ ಕ್ಲೀನ್ ಚಿಟ್
5) ಕಾಫಿ ಶಾಫ್ನಲ್ಲಿ ಯುವತಿ ಫೋಟೋ ತೆಗೆದ ಪ್ರಕರಣ- ಒಂದೇ ತಿಂಗಳಲ್ಲಿ ಸಿಐಡಿಯಿಂದ ಎಡಿಜಿಪಿ ರವೀಂದ್ರನಾಥ್ಗೆ ಕ್ಲೀನ್ ಚಿಟ್