ಅಮಿತ್ ಷಾರಿಂದ ಅಗೌರವ: ಶ್ರೀಗಳಿಂದ ಸ್ಪಷ್ಟನೆ

Published : Aug 15, 2017, 12:17 AM ISTUpdated : Apr 11, 2018, 12:39 PM IST
ಅಮಿತ್ ಷಾರಿಂದ ಅಗೌರವ: ಶ್ರೀಗಳಿಂದ ಸ್ಪಷ್ಟನೆ

ಸಾರಾಂಶ

ಈ ಸಂದರ್ಭದಲ್ಲಿ ಶ್ರೀ ಮಠದ ಗುರುಗಳಿಗೆ ಶ್ರೀ ಅಮಿತ್ ಶಾರವರಿಂದ ಅಗೌರವ ಎಂಬ ವಿಷಯ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆ ಬಗ್ಗೆ ಈ ಸೃಷ್ಟೀಕರಣ ನೀಡಬಯಸುತ್ತೇವೆ.

ನಾಗಮಂಗಲ(ಆ.15): 2 ದಿನಗಳ ಹಿಂದೆ ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಶ್ರೀ'ಗಳ ಜೊತೆ ಮಾತನಾಡುವಾಗ ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡು ನಿರ್ಮಾಲಾನಂದ ಶ್ರೀಗಳಿಗೆ ಅಗೌರನ ತೋರಿರುವ ಭಾವಚಿತ್ರ ಎಲ್ಲಡೆ ವೈರಲ್ ಆಗಿ ಸ್ವಾಮೀಜಿ ಭಕ್ತರಿಂದ ಷಾ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಭಾವಚಿತ್ರಕ್ಕೆ ಸಂಬಂಧಿಸಿದಂತೆ ಶ್ರೀಗಳು ಸ್ಪಷ್ಟಿಕರಣ ನೀಡಿದ್ದಾರೆ.

ಪ್ರಕಟಣೆ

ನಿನ್ನೆ ಶ್ರೀ ಆದಿಚುಂಚನಗಿರಿ ಕ್ಷೇತ್ರದಲ್ಲಿ ಏರ್ಪಡಿಸಿದ್ದ The story of a Guru ಕೃತಿಯ ಬಿಡುಗಡೆ ಸಮಾರಂಭದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಶಾರವರು ಪರಮಪೂಜ್ಯ ಶ್ರೀ ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮಿಗಳವರು  ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪರವರು ಶ್ರೀ ಡಿ ವಿ ಸದಾನಂದಗೌಡರು ಕೇಂದ್ರ ಸಚಿವರಾದ ಶ್ರೀ ಅನಂತಕುಮಾರ್  ಮುಂತಾದ ಗಣ್ಯರು ಪಾಲ್ಗೊಂಡು ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿದ್ದು ಸರಿಯಷ್ಟೆ.

ಈ ಸಂದರ್ಭದಲ್ಲಿ ಶ್ರೀ ಮಠದ ಗುರುಗಳಿಗೆ ಶ್ರೀ ಅಮಿತ್ ಶಾರವರಿಂದ ಅಗೌರವ ಎಂಬ ವಿಷಯ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆ ಬಗ್ಗೆ ಈ ಸೃಷ್ಟೀಕರಣ ನೀಡಬಯಸುತ್ತೇವೆ.

ನಾವು ಭಕ್ತರೊಡನೆ ಇದ್ದ ಸಂದರ್ಭದಲ್ಲಿ ನಮ್ಮ ಕಛೇರಿಯಲ್ಲಿ ಶ್ರೀ ಅಮಿತ್ ಶಾರವರು ಪೂಜ್ಯ ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮಿಗಳವರೊಡನೆ ವಿಚಾರ ವಿನಿಮಯದ ಚರ್ಚೆಯಲ್ಲಿದ್ದರು. ತಮ್ಮ ಅಭ್ಯಾಸದಂತೆ ಕಾಲಿನ ಮೇಲೆ ಕಾಲು ಹಾಕಿ ಕುಳಿತು ಪೂಜ್ಯರೊಂದಿಗೆ ಚರ್ಚೆಯಲ್ಲಿದ್ದ ಶ್ರೀ ಅಮಿತ್ ಶಾರವರು  ನಾವು ಕಛೇರಿಯ ಒಳಗಡೆ ಪ್ರವೇಶಿಸಿದ್ದನ್ನು ಗಮನಿಸಿರಲಿಲ್ಲ. ಗಮನಿಸಿದ ಮೇಲೆ ತಮ್ಮ ಕಾಲನ್ನು ಕೆಳಗಿಳಿಸಿ ಎದ್ದು ನಮ್ಮನ್ನು ಗೌರವಿಸಿ ಮತ್ತೆ ಕುಳಿತರು.  ಇದರಿಂದ ಅಮಿತ್ ಶಾರವರು ನಮಗೆ ಅಗೌರವವನ್ನು ತೋರಿಸಿದ್ದಾರೆಂದು ಯಾರೂ ಭಾವಿಸಬಾರದು.

ರಾಜಕೀಯದ ಹೊರತಾಗಿಯೂ ಶ್ರೀ ಅಮಿತ್ ಶಾರವರು ನಮ್ಮನ್ನು ಈ ಹಿಂದೆ ಹಲವು ಬಾರಿ ಭೇಟಿಯಾದಾಗಲೆಲ್ಲ ಅತ್ಯಂತ ಗೌರವಪೂರ್ವಕವಾಗಿ ಕಂಡಿದ್ದಾರೆ. ನಮ್ಮ ಆಹ್ವಾನವನ್ನು ಗೌರವಿಸಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕೃತಿ ಬಿಡುಗಡೆ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸಿಕೊಟ್ಟ ಶ್ರೀ ಅಮಿತ್ ಶಾರವರಿಂದ ಪೀಠಕ್ಕೆ ಅಗೌರವವಾಗಿದೆ ಎಂದು ನಾವು ಎಂದಿಗೂ ಭಾವಿಸುವುದಿಲ್ಲ. ಭಕ್ತರೂ ಆ  ರೀತಿ ಭಾವಿಸಬಾರದೆಂದು ಈ ಮೂಲಕ ಆಶಿಸುತ್ತೇವೆ.

ಸಹಿ

(ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ)    

ಆದಿಚುಂಚನಗಿರಿ ಮಠ                  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ
ಬೆಂಗ್ಳೂರಲ್ಲಿ ರಾಜ್ಯದ ಮೊದಲ Gen-Z ಪೋಸ್ಟ್ ಆಫೀಸ್! ಏನಿದರ ವಿಶೇಷತೆ?