ಬಿಜೆಪಿ ಮುಖಂಡ ಆರ್. ಅಶೋಕ್‌ಗೆ ಎದುರಾಗಿದೆ ಸಂಕಟ

Published : Mar 06, 2018, 07:55 AM ISTUpdated : Apr 11, 2018, 12:56 PM IST
ಬಿಜೆಪಿ ಮುಖಂಡ ಆರ್. ಅಶೋಕ್‌ಗೆ ಎದುರಾಗಿದೆ ಸಂಕಟ

ಸಾರಾಂಶ

ಅಧಿಕಾರಿಗಳ ತೀವ್ರ ಆಕ್ಷೇಪದ ನಡುವೆಯೂ ಬಿಜೆಪಿ ಅವಧಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನಡೆದಿದ್ದ ‘ಮಾರ್ಕೊಪೋಲೊ ಬಸ್‌ ಖರೀದಿ ಹಗರಣ’ವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, ಈ ಮೂಲಕ ಮಾಜಿ ಸಾರಿಗೆ ಸಚಿವ ಆರ್‌. ಅಶೋಕ್‌ರನ್ನು ಕಟ್ಟಿಹಾಕಲು ಮತ್ತೊಂದು ತಂತ್ರ ಹೆಣೆದಿದೆ.

ಬೆಂಗಳೂರು : ಅಧಿಕಾರಿಗಳ ತೀವ್ರ ಆಕ್ಷೇಪದ ನಡುವೆಯೂ ಬಿಜೆಪಿ ಅವಧಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ನಡೆದಿದ್ದ ‘ಮಾರ್ಕೊಪೋಲೊ ಬಸ್‌ ಖರೀದಿ ಹಗರಣ’ವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು, ಈ ಮೂಲಕ ಮಾಜಿ ಸಾರಿಗೆ ಸಚಿವ ಆರ್‌. ಅಶೋಕ್‌ರನ್ನು ಕಟ್ಟಿಹಾಕಲು ಮತ್ತೊಂದು ತಂತ್ರ ಹೆಣೆದಿದೆ.

ಮಾರ್ಕೋಪೋಲೋ ಬಸ್‌ ಗುಣಮಟ್ಟಉತ್ತಮವಾಗಿಲ್ಲ, ಬೆಲೆಯೂ ದುಬಾರಿ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರೂ ಸಹ ಹಿಂದಿನ ಬಿಜೆಪಿ ಅವಧಿಯಲ್ಲಿ ಬಿಎಂಟಿಸಿ ಖರೀದಿಸಿದ್ದ 98 ಮಾರ್ಕೊಪೋಲೊ ಬಸ್ಸುಗಳು ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದವು. ಹಿಂಬದಿ ಇಂಜಿನ್‌ನ ಬಸ್ಸುಗಳು ತಾಂತ್ರಿಕ ವೈಫಲ್ಯದಿಂದ ಕೂಡಿದ್ದವು. ಇವು ವಿಶೇಷ ಬಸ್ಸುಗಳಾಗಿದ್ದರೂ ಸಾಮಾನ್ಯ ಪ್ರಯಾಣ ದರದಲ್ಲಿ ಓಡಿಸಲಾಗಿತ್ತು. ಈ ಬಸ್‌ಗಳ ಸಂಚಾರದಿಂದ ನಾಲ್ಕು ವರ್ಷಗಳಲ್ಲಿ ಬಿಎಂಟಿಸಿಗೆ 30 ಕೋಟಿ ರು. ನಷ್ಟಉಂಟಾಗಿತ್ತು. 8 ವರ್ಷಗಳ ಕಾಲ ಬಸ್ಸು ಓಡಿಸಬೇಕು ಎಂಬ ಒಪ್ಪಂದದ ಹಿನ್ನೆಲೆಯಲ್ಲಿ ಬಿಎಂಟಿಸಿ ಸಾಕಷ್ಟುನಷ್ಟಅನುಭವಿಸಿದೆ ಎಂದು ಬಿಎಂಟಿಸಿ ಆಂತರಿಕ ವರದಿಯಿಂದ ಬಯಲಾಗಿತ್ತು. ಈ ವರದಿ ಆಧಾರದ ಮೇಲೆ ಯಥಾವತ್ತಾಗಿ ಸಿಐಡಿ ತನಿಖೆಗೆ ವಹಿಸಿ ಆದೇಶಿಸಲಾಗಿದೆ.

ಈ ಬಗ್ಗೆ ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ, ಬಿಎಂಟಿಸಿಗೆ 98 ಮಾರ್ಕೊಪೋಲೋ ಬಸ್ಸು ಖರೀದಿ ಮಾಡಲಾಗಿತ್ತು. ಈ ಖರೀದಿ ಒಪ್ಪಂದದಿಂದ ಬಿಎಂಟಿಸಿಗೆ ತೀವ್ರ ನಷ್ಟಉಂಟಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಆರೋಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆಂತರಿಕ ತನಿಖಾ ವರದಿಯನ್ನು ಸಿಐಡಿಗೆ ವಹಿಸಿ ಆದೇಶಿಸಲಾಗಿದೆ ಎಂದು ಹೇಳಿದರು.

ಏನಿದು ಅಕ್ರಮ?

ಆರ್‌.ಅಶೋಕ್‌ ಸಚಿವರಾಗಿದ್ದಾಗ ಜೆ.ಎನ್‌.ನಮ್‌ರ್‍ ಯೋಜನೆಯಡಿ ಬಸ್ಸುಗಳನ್ನು 2008-09ನೇ ಸಾಲಿನಲ್ಲಿ ಖರೀದಿ ಮಾಡಲಾಗಿತ್ತು. ಖರೀದಿಗೆ ಕೇಂದ್ರ ಸರ್ಕಾರದ ಶೇ.35, ರಾಜ್ಯ ಸರ್ಕಾರದ ಶೇ.15 ಅನುದಾನ ಸಿಕ್ಕಿತ್ತು. ಉಳಿದ ಶೇ.50 ಮೊತ್ತವನ್ನು ಬಿಎಂಟಿಸಿ ಭರಿಸಿತ್ತು. ಪ್ರತಿ ಬಸ್‌ಗೆ 31 ಲಕ್ಷ ರು. ನೀಡಿ ಖರೀದಿ ಮಾಡಲಾಗಿತ್ತು.

ಒಟ್ಟು 98 ಬಸ್‌ಗಳ ಖರೀದಿಗೆ 31 ಕೋಟಿ ಖರ್ಚು ಮಾಡಲಾಗಿತ್ತು. ಈ ಬಸ್ಸುಗಳ ಕಾರ್ಯಾಚರಣೆ ಬಗ್ಗೆ ಆರಂಭದಿಂದಲೇ ಪ್ರಯಾಣಿಕರಿಂದ ಅಸಮಾಧಾನ ವ್ಯಕ್ತವಾಗಿತ್ತು. ಹೆಚ್ಚು ಹೊಗೆ ಉಗುಳುತ್ತವೆ ಎಂಬ ಕಾರಣಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿತ್ತು. ಮೈಲೇಜ್‌ ಕಡಿಮೆ, ಹೊಗೆ ಜಾಸ್ತಿ ಬರುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಟಾಟಾ ಕಂಪನಿಯೇ ಉಚಿತವಾಗಿ 96 ಬಸ್‌ಗಳ ಎಂಜಿನ್‌ ಬದಲಿಸಿತ್ತು. ಬಿಎಂಟಿಸಿ ಪ್ರಯಾಣ ದರವನ್ನು ಶೇ.50ರಷ್ಟುಕಡಿಮೆ ಮಾಡಿದರೂ ಸಾರ್ವಜನಿಕರು ಈ ಬಸ್ಸು ಬಳಸುತ್ತಿರಲಿಲ್ಲ ಎಂದು ಹೇಳಲಾಗಿತ್ತು. ಹೀಗಾಗಿ ಬಿಎಂಟಿಸಿಗೆ ಪ್ರತಿ ಕಿ.ಮೀ.ಗೆ 27 ರು.ಗಳಷ್ಟುನಷ್ಟವಾಗುತ್ತಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗರ್ಭಗುಡಿ ಬಳಿ, ಚಾಮುಂಡಿಬೆಟ್ಟದ ತುದಿಯಲ್ಲಿ ಕಾಮಗಾರಿಯ ಆತಂಕ: ಮೈಸೂರಿನಲ್ಲಿ ಪ್ರತಿಭಟನೆ
ರೀಲ್ಸ್‌ ಹುಚ್ಚಿಗೆ ತನ್ನದೇ ಟ್ರ್ಯಾಕ್ಟರ್‌ ಗಾಲಿಗೆ ಸಿಲುಕಿ ಕಲಬುರಗಿಯ 23 ವರ್ಷದ ರೈತ ಸಾವು