
ಬೆಂಗಳೂರು (ಸೆ.27): ಮಹಾನವಮಿ ಹಬ್ಬಕ್ಕೆ ಸರ್ಕಾರಿ ರಜೆ ಇದ್ದರೂ, ಕ್ರಿಶ್ಚಿಯನ್ ಶಾಲೆಗಳು ರಜೆ ನೀಡದೇ ಉದ್ಧಟತನ ಮೆರೆದಿವೆ. ಬೆಂಗಳೂರಿನ ಕೆಲ ಕ್ರಿಶ್ಚಿಯನ್ ಚಾರಿಟೆಬಲ್ ಟ್ರಸ್ಟ್'ನ ಮಾಲೀಕತ್ವದ ಶಾಲೆಗಳು ಮತ್ತು ಮಂಗಳೂರಿನ ಫಾಧರ್ ಮುಲ್ಲರ್ ಶಾಲೆಯ ಮಕ್ಕಳಿಗೆ ವಿಜಯ ದಶಮಿ ಹಾಗೂ ಆಯುಧ ಪೂಜೆ ಹಬ್ಬದ ಸಂಭ್ರಮ ಇಲ್ಲ.
ಮಂಗಳೂರಿನ ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್ ರಜೆ ಪಟ್ಟಿ ಬಿಡುಗಡೆ ಮಾಡಿದ್ದು, ಮಹಾನವಮಿಗೆ ರಜೆ ನೀಡಿಲ್ಲ. ಮಹಾನವಮಿ ರಾಜ್ಯ ಅಷ್ಟೆ ಅಲ್ಲ ಇಡೀ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದ್ದು, ರಜೆ ವಿಷಯದಲ್ಲಿ ತಾರತಮ್ಯದ ಮೂಲಕ ಮಕ್ಕಳಲ್ಲಿ ಧಾರ್ಮಿಕ ವಿಷ ಬೀಜ ಬಿತ್ತಲು ಮುಂದಾಗಿದೆ ಎಂದು ಆರೋಪ ಕೇಳಿ ಬಂದಿದೆ. ಇನ್ನು ಕ್ರಿಶ್ಚಿಯನ್ ಶಾಲೆಗಳ ಈ ಉದ್ಘಟತನಕ್ಕೆ ಹಿಂದೂ ಹೋರಾಟಗಾರು ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ವಿಜಯದಶಮಿ ಅಂದು ಶಾಲೆಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.