
ಕಲಬುರಗಿ : ಚಿಂಚೋಳಿ ಉಪ ಸಮರದಲ್ಲಿ ಬಿಜೆಪಿಗೆ ಎದುರಾಗಿದ್ದ ಬಂಡಾಯ ಶಮನವಾಗಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿದ್ದ ಭಾಗ್ಯಶ್ರೀ ಸಂತೋಷ ತಳವಾರ ಅವರು ಪಕ್ಷದ ಅಧಿಕೃತ ಉಮೇದುವಾರ ಡಾ.ಅವಿನಾಶ್ ಜಾಧವ್ ಬೆಂಬಲಿಸಿ ಕಣದಿಂದ ನಿವೃತ್ತಿಯಾಗುವುದಾಗಿ ಭಾನುವಾರ ಘೋಷಿಸಿದ್ದಾರೆ.
ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್ ಈ ಬಂಡಾಯ ಶಮನದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಭಾಗ್ಯಶ್ರೀ ಪತಿ ಸಂತೋಷ್ ತಳವಾರ ಬಿಜೆಪಿ ಒಬಿಸಿ ಮೋರ್ಚಾ ಕಲಬುರಗಿ ಮಹಾನಗರದ ಅಧ್ಯಕ್ಷರಾಗಿದ್ದರು. ಚಿಂಚೋಳಿಯಲ್ಲಿ ಪಕ್ಷ ಡಾ.ಅವಿನಾಶ್ಗೆ ಟಿಕೆಟ್ ಘೋಷಿಸಿದ್ದನ್ನು ವಿರೋಧಿಸಿ ತಮ್ಮ ಪತ್ನಿ ಭಾಗ್ಯಶ್ರೀಯವರನ್ನೇ ಸಂತೋಷ್ ಕಣಕಿಳಿಸಿದ್ದರು.
ಈ ಕುರಿತು ಕಳೆದ ವಾರ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನೂ ಹೊರಹಾಕಿದ್ದರು. ಇದೀಗ ಮಾಲೀಕಯ್ಯಾ ಗುತ್ತೇದಾರ್ ಈ ಬೆಳವಣಿಗೆಯನ್ನು ಶಮನ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿಗೆ ಎದುರಾಗಿದ್ದ ಅಡ್ಡಿ ನಿವಾರಿಸುವಲ್ಲಿ ಯಶ ಕಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.