ಚೀನಾದ ಲಾಂಗ್ ಮಾರ್ಚ್-5 ವೈ2 ರಾಕೆಟ್ ಉಡಾವಣೆ ಪ್ರಯತ್ನ ವಿಫಲ

Published : Jul 02, 2017, 09:08 PM ISTUpdated : Apr 11, 2018, 12:58 PM IST
ಚೀನಾದ ಲಾಂಗ್ ಮಾರ್ಚ್-5 ವೈ2 ರಾಕೆಟ್ ಉಡಾವಣೆ ಪ್ರಯತ್ನ ವಿಫಲ

ಸಾರಾಂಶ

ಲಾಂಗ್ ಮಾರ್ಚ್-5 ವೈ2 ರಾಕೆಟ್ 25 ಟನ್'ಗಳಷ್ಟು ಭಾರವನ್ನು ಹೊತ್ತೊಯ್ಯಬಲ್ಲುದು. ಚೀನಾದ ಅತೀ ತೂಕದ 7,500 ಕಿಲೋ ಭಾರದ ಶಿಜಿಯಾನ್-18 ಎಂಬ ಉಪಗ್ರಹವನ್ನು ಇದೇ ರಾಕೆಟ್ ಹೊತ್ತೊಯ್ಯಲಿದೆ. ಈಗ ಈ ರಾಕೆಟ್'ನ ಪರೀಕ್ಷಾರ್ಥ ಉಡಾವಣೆ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಶಿಜಿಯಾನ್'ನ ಯೋಜನೆಯನ್ನ ಚೀನಾ ಮುಂದೂಡುವ ಸಾಧ್ಯತೆ ಇದೆ.

ಬೀಜಿಂಗ್(ಜುಲೈ 02): ಭಾರೀ ಭಾರದ ವಸ್ತುಗಳನ್ನು ಹೊತ್ತೊಯ್ಯಲೆಂದು ಚೀನಾ ನಿರ್ಮಿಸಿದ "ಲಾಂಗ್ ಮಾರ್ಚ್-5 ವೈ2" ರಾಕೆಟ್'ನ ಉಡಾವಣೆ ಪ್ರಯತ್ನ ಇಂದು ವಿಫಲವಾಗಿದೆ. ಸ್ಥಳೀಯ ಕಾಲಮಾನ 7:23ರ ಸಮಯದಲ್ಲಿ ಹೈನಾನ್ ಪ್ರಾಂತ್ಯದಲ್ಲಿರುವ ವೆಂಚಾಂಗ್ ಸ್ಪೇಸ್ ಲಾಂಚ್ ಸೆಂಟರ್'ನಿಂದ ರಾಕೆಟ್ ಉಡಾವಣೆ ಮಾಡಲಾಯಿತು. ಆದರೆ, ಮಾರ್ಗಮಧ್ಯೆ ತಾಂತ್ರಿಕ ದೋಷ ಕಾಣಿಸಿಕೊಂಡಿತು ಎಂದು ಚೀನಾದ ಕ್ಸಿನ್'ಹುಆ ಸುದ್ದಿ ಸಂಸ್ಥೆಯು ಹೇಳಿದೆ.

ಆದರೆ, ಈ ಲಾಂಗ್ ಮಾರ್ಚ್-5 ರಾಕೆಟ್'ನ ಪರೀಕ್ಷಾರ್ಥ ಉಡಾವಣೆ ನಡೆದದ್ದು ಇದು ಎರಡನೇ ಬಾರಿ. ಮೊದಲನೇ ಪರೀಕ್ಷೆಯಲ್ಲಿ ಸಫಲವಾಗಿದ್ದ ರಾಕೆಟ್ ಇದೀಗ ಎರಡನೇ ಪರೀಕ್ಷೆಯಲ್ಲಿ ವಿಫಲವಾಗಿದೆ.

ಲಾಂಗ್ ಮಾರ್ಚ್-5 ವೈ2 ರಾಕೆಟ್ 25 ಟನ್'ಗಳಷ್ಟು ಭಾರವನ್ನು ಹೊತ್ತೊಯ್ಯಬಲ್ಲುದು. ಚೀನಾದ ಅತೀ ತೂಕದ 7,500 ಕಿಲೋ ಭಾರದ ಶಿಜಿಯಾನ್-18 ಎಂಬ ಉಪಗ್ರಹವನ್ನು ಇದೇ ರಾಕೆಟ್ ಹೊತ್ತೊಯ್ಯಲಿದೆ. ಈಗ ಈ ರಾಕೆಟ್'ನ ಪರೀಕ್ಷಾರ್ಥ ಉಡಾವಣೆ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಶಿಜಿಯಾನ್'ನ ಯೋಜನೆಯನ್ನ ಚೀನಾ ಮುಂದೂಡುವ ಸಾಧ್ಯತೆ ಇದೆ.

ಇದೇ ರಾಕೆಟ್'ನಲ್ಲಿ ಚೀನಾ ದೇಶವು ಚಂದ್ರನಲ್ಲಿಗೆ ಚಾಂಗ್-5 ಎಂಬ ಉಪಗ್ರಹವೊಂದನ್ನು ಕಳುಹಿಸುವ ಯೋಜನೆಯೂ ಇದೆ. ಅದಕ್ಕೂ ಮುನ್ನ ಲಾಂಗ್ ಮಾರ್ಚ್-5 ರಾಕೆಟ್'ನ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಮತ್ತೊಮ್ಮೆ ಪರೀಕ್ಷೆ ನಡೆಸುವ ಸಾಧ್ಯತೆ ಇದೆ.

ಭಾರತದ ಸಾಮರ್ಥ್ಯವೆಷ್ಟು?
ತಿಂಗಳ ಹಿಂದಷ್ಟೇ ಭಾರತದ ಜಿಎಸ್'ಎಲ್'ವಿ ಮಾರ್ಕ್-3 ರಾಕೆಟ್ ಮೂಲಕ ಜಿಸ್ಯಾಟ್-19 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಈ ಸೆಟಿಲೈಟ್'ನ ತೂಕ 3,136 ಕಿಲೋ, ಅಂದರೆ ಸುಮಾರು 3 ಟನ್. ನಾಲ್ಕು ಟನ್'ಗಿಂತಲೂ ಹೆಚ್ಚು ತೂಕ ಹೊರಬಲ್ಲ ರಾಕೆಟನ್ನು ಭಾರತ ಲಾಂಚ್ ಮಾಡಿದ್ದು ಇದೇ ಮೊದಲು. ಆದರೆ, ಚೀನಾ ದೇಶ ಈ ವಿಚಾರದಲ್ಲಿ ತುಸು ಮುಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?