
ಡೋಕ್ಲಾಂ(ಆ.23): ಡೋಕ್ಲಾಂನಲ್ಲಿ ಸೃಷ್ಟಿಯಾಗಿರುವ ಸೇನಾ ಬಿಕ್ಕಟ್ಟಿಗೆ ಸಂಬಂಧಿಸಿ, ಪದೇಪದೇ ಉದ್ರೇಕಕಾರಿ ಹೇಳಿಕೆ ನೀಡುತ್ತಾ ಬಂದಿರುವ ಚೀನಾ, ಇದೀಗ ಭಾರತದ ಗಡಿಯೊಳಗೆ ನುಗ್ಗುವ ಗಂಭೀರ ಬೆದರಿಕೆಯೊಡ್ಡಿದೆ.
ಗಡಿಯಲ್ಲಿನ ಬಿಕ್ಕಟ್ಟು ಬೀಜಿಂಗ್'ಗೆ ಬೆದರಿಕೆ ಎಂಬುದಾಗಿ ಪರಿಗಣಿಸಿ, ತಮ್ಮ ಸೇನೆ ಭಾರತದೊಳಗೆ ಪ್ರವೇಶಿಸಿದರೆ ಸಂಪೂರ್ಣ ಅಲ್ಲೋಲಕಲ್ಲೋಲವಾಗಲಿದೆ ಎಂದು ಚೀನಾ ಎಚ್ಚರಿಸಿದೆ. ಡೋಕ್ಲಾಮ್'ನಲ್ಲಿ ತನ್ನ ರಸ್ತೆ ನಿರ್ಮಾಣ ಯೋಜನೆ ತನಗೆ ಬೆದರಿಕೆ ಎಂಬಂತೆ ಭಾರತ ವಾದಿಸುತ್ತಿರುವುದು ಹಾಸ್ಯಾಸ್ಪದ ಮತ್ತು ದುರುದ್ದೇಶಪೂರಿತವಾದುದು ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ. ತಮ್ಮ ಭೂ ವ್ಯಾಪ್ತಿಯ ಪರಮಾಧಿಕಾರದ ಮೇಲೆ ಯಾವುದೇ ದೇಶ ಅಥವಾ ವ್ಯಕ್ತಿ ಅತಿಕ್ರಮಣ ನಡೆಸುವುದಕ್ಕೆ ಚೀನಾ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಚೀನಾ ಎಚ್ಚರಿಕೆ ನೀಡಿದೆ.
ಭಾರತದ ಗಡಿ ಪ್ರದೇಶದಲ್ಲಿ, ಬೃಹತ್ ಪ್ರಮಾಣದ ಮೂಲಭೂತ ಸೌಕರ್ಯ ನಿರ್ಮಾಣಗೊಳ್ಳುವಾಗ, ಅದೊಂದು ಬೆದರಿಕೆ ಎಂದು ಭಾವಿಸಿ, ಚೀನಾ ಭಾರತದ ಗಡಿಪ್ರವೇಶಿಸಬಹುದೇ? ಅದು ಸಂಪೂರ್ಣ ಅಸ್ತವ್ಯಸ್ತಕ್ಕೆ ಕಾರಣವಾಗುವುದಿಲ್ಲವೇ? ಎಂದು ಚೀನಾ ಪ್ರಶ್ನಿಸಿದೆ. ಭೂತಾನ್-ಚೀನಾ ಗಡಿ ಪ್ರದೇಶದ ಸಿಕ್ಕಿಂ ವಲಯದ ಡೋಕ್ಲಾಂನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಕೆಲವು ದಿನಗಳಿಂದ ಉದ್ವಿಘ್ನ ವಾತಾವರಣವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.