1962ರ ಚೀನಾವೇ ಬೇರೆ ಈಗಿನ ಚೀನಾವೇ ಬೇರೆ; ಜೇಟ್ಲಿ ಹೇಳಿಕೆಗೆ ಚೀನಾ ತಿರುಗೇಟು

Published : Jul 03, 2017, 04:30 PM ISTUpdated : Apr 11, 2018, 01:06 PM IST
1962ರ ಚೀನಾವೇ ಬೇರೆ ಈಗಿನ ಚೀನಾವೇ ಬೇರೆ; ಜೇಟ್ಲಿ ಹೇಳಿಕೆಗೆ ಚೀನಾ ತಿರುಗೇಟು

ಸಾರಾಂಶ

ಈ ಹಿಂದೆಯೂ ಈ ವಿಚಾರದಲ್ಲಿ ಕಟುವಾಗಿ ಮಾತನಾಡಿದ್ದ ಚೀನಾ, 1962ರ ಯುದ್ಧವನ್ನು ಭಾರತ ಮರೆತಿದೆ ಎಂದು ಹಂಗಿಸಿತ್ತು. ಇದಕ್ಕೆ ಪ್ರತಿಯಾಗಿ ಅರುಣ್ ಜೇಟ್ಲಿಯವರು, ಈಗಿನ ಭಾರತವು 1962ರ ಭಾರತಕ್ಕಿಂತ ಭಿನ್ನವಾಗಿದೆ ಎಂದು ಟಾಂಗ್ ಕೊಟ್ಟಿದ್ದರು.

ನವದೆಹಲಿ(ಜುಲೈ 03): 1962ರ ಭಾರತವೇ ಬೇರೆ ಈಗಿನ ಭಾರತವೇ ಬೇರೆ ಎಂದು ಚೀನಾಗೆ ಟಾಂಗ್ ಕೊಟ್ಟಿದ್ದ ಭಾರತದ ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿಗೆ ಈಗ ಚೀನಾ ಅದೇ ದಾಟಿಯಲ್ಲಿ ತಿರುಗೇಟು ನೀಡಿದೆ. 2017ರ ಭಾರತ ಹೇಗೆ ವಿಭಿನ್ನವೋ ಹಾಗೆಯೇ ಚೀನಾ ಕೂಡ ಬದಲಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದಾರೆ.

ಸಿಕ್ಕಿಂ ಬಳಿ ತನ್ನ ಗಡಿಭಾಗದೊಳಗೆ ಭಾರತೀಯ ಸೈನಿಕರು ಪ್ರವೇಶಸಿದ್ದರೆಂದು ಮತ್ತೊಮ್ಮೆ ವಾದಿಸಿರುವ ಚೀನಾ, ತನ್ನ ನೆಲವನ್ನು ರಕ್ಷಿಸಿಕೊಳ್ಳಲು ಚೀನಾ ಏನು ಬೇಕಾದರೂ ಮಾಡುತ್ತದೆ ಎಂದು ಕಟ್ಟೆಚ್ಚರಿಕೆ ನೀಡಿದೆ.

ಈ ಹಿಂದೆಯೂ ಈ ವಿಚಾರದಲ್ಲಿ ಕಟುವಾಗಿ ಮಾತನಾಡಿದ್ದ ಚೀನಾ, 1962ರ ಯುದ್ಧವನ್ನು ಭಾರತ ಮರೆತಿದೆ ಎಂದು ಹಂಗಿಸಿತ್ತು. ಇದಕ್ಕೆ ಪ್ರತಿಯಾಗಿ ಅರುಣ್ ಜೇಟ್ಲಿಯವರು, ಈಗಿನ ಭಾರತವು 1962ರ ಭಾರತಕ್ಕಿಂತ ಭಿನ್ನವಾಗಿದೆ ಎಂದು ಟಾಂಗ್ ಕೊಟ್ಟಿದ್ದರು.

ಟಿಬೆಟ್-ಭೂತಾನ್-ಸಿಕ್ಕಿಂ ಮೂರೂ ಪ್ರದೇಶಗಳ ಗಡಿಗಳ ಸಂಗಮವಾಗುವ ಪ್ರದೇಶದಲ್ಲಿ ಈಗ ಚೀನಾ ಕ್ಯಾತೆ ತೆಗೆದಿರುವುದು. ಡೋಕ್ಲಾಮ್ ಎಂಬ ಈ ಪ್ರದೇಶದಲ್ಲಿ ಚೀನೀಯರು ಅತಿಕ್ರಮಿಸಿಕೊಂಡು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ತನಗೆ ಸೇರಿದ್ದು ಎಂಬುದು ಭೂತಾನ್ ದೇಶದ ವಾದ. ಹಲವು ವರ್ಷಗಳಿಂದ ಇರುವ ವಿವಾದ ಇದಾಗಿದೆ. ವಿವಾದಿತ ಜಾಗವಾಗಿದ್ದರೂ ಚೀನೀಯರು ಅತಿಕ್ರಮಣ ಮಾಡುತ್ತಿರುವುದರಿಂದ ಭೂತಾನ್ ದೇಶವು ಭಾರತದ ನೆರವನ್ನ ಯಾಚಿಸಿದೆ. ಅನೇಕ ವರ್ಷಗಳಿಂದ ಈ ಪ್ರದೇಶವನ್ನು ಭಾರತ ಮತ್ತು ಭೂತಾನ್ ದೇಶದ ಭದ್ರತಾ ಪಡೆಗಳು ಜಂಟಿಯಾಗಿ ರಕ್ಷಣೆ ಮಾಡಿಕೊಂಡು ಬರುತ್ತಿವೆ. ಅಂತಾರಾಷ್ಟ್ರೀಯವಾಗಿ ಸಹಮತದಿಂದ ವಿವಾದ ಶಮನ ಆಗುವವರೆಗೂ ಯಾರೂ ಕೂಡ ಇಲ್ಲಿ ಅತಿಕ್ರಮಣ ಮಾಡುವುದಾಗಲೀ ಗಡಿ ರಚಿಸುವುದಾಗಲೀ ಮಾಡುವಂತಿಲ್ಲ. ಆದರೆ, ಚೀನಾ ಇವೆಲ್ಲವನ್ನೂ ಮೀರಿ, ಇದು ತನ್ನದೇ ಪ್ರದೇಶ ಎಂದು ಏಕಮುಖವಾಗಿ ಮಾತನಾಡುತ್ತಿದೆ. ಭೂತಾನ್ ಪರವಾಗಿ ಭಾರತ ವಕಾಲತು ವಹಿಸಿಕೊಂಡು ಚೀನಾವನ್ನು ಎದುರಿಸಲು ಸಜ್ಜಾಗಿದೆ. ಪ್ರದೇಶದ ಬಳಿಕ ಸಾಕಷ್ಟು ಸಂಖ್ಯೆಯಲ್ಲಿ ಚೀನೀ ಸೈನಿಕರು ಮತ್ತು ಭಾರತೀಯ ಸೈನಿಕರು ಮುಖಾಮುಖಿಯಾಗಿ ನಿಂತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!