ಸಂವೇದನೆ ಇಲ್ಲದ ಕೇಂದ್ರದಿಂದ ಅಂಗವಿಕಲರಿಗೆ ಜಿಎಸ್ಟಿ: ರಾಹುಲ್ ಕಿಡಿ, ವಾಪಸು ಪಡೆಯಲು ಆಗ್ರಹ

Published : Jul 03, 2017, 04:11 PM ISTUpdated : Apr 11, 2018, 12:35 PM IST
ಸಂವೇದನೆ ಇಲ್ಲದ ಕೇಂದ್ರದಿಂದ ಅಂಗವಿಕಲರಿಗೆ ಜಿಎಸ್ಟಿ: ರಾಹುಲ್ ಕಿಡಿ, ವಾಪಸು ಪಡೆಯಲು ಆಗ್ರಹ

ಸಾರಾಂಶ

ಕೇಂದ್ರ ಸರ್ಕಾರವು ಸಂವೇದನೆಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಜಿಎಸ್ಟಿಯಲ್ಲಿರುವ ‘ಅಂಗವೈಕಲ್ಯ ತೆರಿಗೆ’ಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಅಂಗವೈಕಲ್ಯ ತೆರಿಗೆ’ಯಿಂದ ಲಕ್ಷಾಂತರ ಅಂಗವಿಕಲರು ಇನ್ನಷ್ಟು ಕಷ್ಟಪಡುವಂತಾಗುತ್ತದೆ ಎಂದಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರವು ಸಂವೇದನೆಯನ್ನು ಕಳೆದುಕೊಂಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಜಿಎಸ್ಟಿಯಲ್ಲಿರುವ ‘ಅಂಗವೈಕಲ್ಯ ತೆರಿಗೆ’ಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ‘ಅಂಗವೈಕಲ್ಯ ತೆರಿಗೆ’ಯಿಂದ ಲಕ್ಷಾಂತರ ಅಂಗವಿಕಲರು ಇನ್ನಷ್ಟು ಕಷ್ಟಪಡುವಂತಾಗುತ್ತದೆ ಎಂದಿದ್ದಾರೆ.

ವ್ಹೀಲ್ ಚೇರ್, ಬ್ರೀಲ್ ಟೈಪ್’ರೈಟರ್’ಗಳ ಮೇಲೆ ಜಿಎಸ್’ಟಿ ವಿಧಿಸಿ ಸರ್ಕಾರವು ದುರ್ಬಲರ ವಿಚಾರದಲ್ಲಿ ಸಂವೇದನೆಯನ್ನು ಕಳೆದುಕೊಂಡಿದೆಯೆಂದು ಇನ್ನೊಮ್ಮೆ ಸಾಬೀತುಪಡಿಸಿದೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.

ಅಂಗವಿಕಲರು ಬಳಸುವ ವ್ಹೀಲ್ ಚೇರ್, ಬ್ರೈಲ್ ಟೈಪ್’ರೈಟರ್, ಬ್ರೈಲ್ ಹಾಳೆಗಳು, ಶ್ರವಣ ಸಾಧನಗಳು ಮುಂತಾದವುಗಳ ಮೇಲೆ ಕೇಂದ್ರ ಸರ್ಕಾರವು ಶೇ.5 ರಿಂದ ಶೇ.18ರವರೆಗೆ ಜಿಎಸ್’ಟಿಯನ್ನು ವಿಧಿಸಿದೆ.

ಜಿಎಸ್ಟಿ ಜಾರಿಯಾಗುವ ಮುಂಚೆ ಅಂಗವಿಕಲರು ಬಳಸುವ ಸಾಧನಗಳಿಗೆ ಯಾವುದೇ ರೀತಿಯ ಕಸ್ಟಮ್ಸ್ ಮತ್ತು ಅಬಕಾರಿ ತೆರಿಗೆಗಳು ಅನ್ವಯವಾಗುತ್ತಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ