ಬಂಕರ್ ನಾಶ: ಭಾರತದ ಮೇಲೆಯೇ ಗೂಬೆ ಕೂರಿಸಿದ ಚೀನಾ

Published : Jun 27, 2017, 02:02 PM ISTUpdated : Apr 11, 2018, 01:12 PM IST
ಬಂಕರ್ ನಾಶ: ಭಾರತದ ಮೇಲೆಯೇ ಗೂಬೆ ಕೂರಿಸಿದ ಚೀನಾ

ಸಾರಾಂಶ

ನಮ್ಮ ಸೇನೆಯ ಮೇಲೆಯೆ ಗೂಬೆ ಕೂರಿಸಿರುವ ಅವರು ' ನಮ್ಮ ಸೇನೆ ವಾಸ್ತವಿಕ ನಿಯಂತ್ರಣ ರೇಖೆಯ ದೋಗ್ಲಾಂಗ್ ಪ್ರದೇಶದಲ್ಲಿ ರಸ್ತೆ ನಿರ್ಮಿಸುತ್ತಿದ್ದು, ಆದರೆ ಭಾರತೀಯ ಯೋಧರ ಅಡ್ಡಿಯಿಂದ ಇದು ಸ್ಥಗಿತಗೊಂಡಿದೆ. ಸಿಕ್ಕಿಂ ವಲಯದಲ್ಲಿರುವ ಭಾರತ ಚೀನಾ ಗಡಿಯ ಬಗ್ಗೆ ಒಪ್ಪಂದದಲ್ಲಿ ಈಗಾಗಲೇ ಉಲ್ಲೇಖಿಸಲಾಗಿದೆ. ಆದರೂ ಭಾರತವೇ ತಗಾದೆ ತೆಗೆಯುತ್ತಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವದೆಹಲಿ(ಜೂ.27): ನಿನ್ನೆ ಭಾರತದ ಸಿಕ್ಕಿಂ ಗಡಿ ಪ್ರದೇಶದಲ್ಲಿ ಚೀನಾ ಪಡೆ ಅತಿಕ್ರಮ ಪ್ರವೇಶಿಸಿದ್ದಲ್ಲದೆ 2 ಬಂಕರ್'ಗಳನ್ನು ನಾಶ ಪಡಿಸಿದ್ದಕ್ಕೆ ಭಾರತದ ಸೇನೆಯ ಮೇಲೆಯೇ ಗೂಬೆ ಕೂರಿಸಿದೆ.

ಸಿಕ್ಕಿಂ'ನ ನಾಥು ಲಾ ವಾಸ್ತವಿಕ ಗಡಿ ಪ್ರದೇಶದಲ್ಲಿ ಚೀನಾ ಯೋಧರು ಅತಿಕ್ರಮ ಪ್ರವೇಶಿಸಿ ಭಾರತೀಯ ಸೇನೆಯ ಬಂಕರ್'ಗಳನ್ನು ನಾಶ ಪಡಿಸಿದ್ದರು. ಇದನ್ನು ತಿರುಚಿರುವ ಅಲ್ಲಿನ ಸೇನೆ ' ಭಾರತದ ಗಡಿ ಭದ್ರತಾ ಪಡೆಯ ಯೋಧರು ಸಿಕ್ಕಿಂ ಸೆಕ್ಷನ್'ನಲ್ಲಿ ನಮ್ಮ ಭೂಭಾಗ ಪ್ರವೇಶಿಸಿದ ಕಾರಣ ನಾವು ಪ್ರತ್ಯುತ್ತರ ನೀಡಬೇಕಾಯಿತು' ಎಂದು ಚೀನಾದ  ವಿಧೇಶಾಂಗ ಇಲಾಖೆಯ ವಕ್ತಾರರಾದ ಗೆಂಗ್ ಶುಯಾಂಗ್ ಕಳೆದ ರಾತ್ರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸೇನೆಯ ಮೇಲೆಯೆ ಗೂಬೆ ಕೂರಿಸಿರುವ ಅವರು ' ನಮ್ಮ ಸೇನೆ ವಾಸ್ತವಿಕ ನಿಯಂತ್ರಣ ರೇಖೆಯ ದೋಗ್ಲಾಂಗ್ ಪ್ರದೇಶದಲ್ಲಿ ರಸ್ತೆ ನಿರ್ಮಿಸುತ್ತಿದ್ದು, ಆದರೆ ಭಾರತೀಯ ಯೋಧರ ಅಡ್ಡಿಯಿಂದ ಇದು ಸ್ಥಗಿತಗೊಂಡಿದೆ. ಸಿಕ್ಕಿಂ ವಲಯದಲ್ಲಿರುವ ಭಾರತ ಚೀನಾ ಗಡಿಯ ಬಗ್ಗೆ ಒಪ್ಪಂದದಲ್ಲಿ ಈಗಾಗಲೇ ಉಲ್ಲೇಖಿಸಲಾಗಿದೆ. ಆದರೂ ಭಾರತವೇ ತಗಾದೆ ತೆಗೆಯುತ್ತಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚೀನಾ ಟೆಬಿಟ್ ಪ್ರದೇಶದ ಮೂಲಕ ಯಾತ್ರಾರ್ಥಿಗಳು ಮಾನಸ ಸರೋವರಕ್ಕೆ ತೆರಳುವ ಸುಲಭ ಮಾರ್ಗವನ್ನು ಸ್ಥಗಿತಗೊಳಿಸಿದೆ. ನಿನ್ನೆ ನಡೆದ ಘಟನೆಯಿಂದ ಸಿಕ್ಕಿಂ ಪ್ರದೇಶದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.

ಎರಡೂ ಸೇನೆಗಳ ಹಿರಿಯ ಅಧಿಕಾರಿಗಳ ನಡುವೆ ಜೂನ್.20ರಂದು ಧ್ವಜಸ್ತಂಭ ಮಾತುಕತೆ ನಡೆದಿದ್ದು, ಆದಾಗ್ಯು ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. 2008ರ ನವೆಂಬರ್'ನಲ್ಲೂ ಕೂಡ ಇದೇ ಪ್ರದೇಶದಲ್ಲಿ ಚೀನಾ ಪಡೆ ಬಂಕರ್'ಗಳನ್ನು ನಾಶಗೊಳಿಸಿತ್ತು. 1962ರ ಭಾರತ ಚೀನಾ ಯುದ್ಧದ ನಂತರ ಚೀನಾವು ಭಾರತದ ಅರುಣಾಚಲ ಪ್ರದೇಶ ಭೂಭಾಗವನ್ನು ತನ್ನದೆಂದು ವಾದಿಸುತ್ತಿದೆ. ಅಲ್ಲದೆ 1990ರ ಆರಂಭದಿಂದಲೂ 2 ದೇಶಗಳ ನಡುವೆ ಸುಮಾರು 20 ಬಾರಿ ಮತುಕತೆ ನಡೆದಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.    

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!