ಹೊಟ್ಟೆ ತುಂಬಿಕೊಳ್ಳಲು ಬಡವರ ಬಡಿದಾಟ: ಇವರ ಅಸಹಾಯಕತೆಯೇ ಇವನ ಬಂಡವಾಳ

Published : Feb 06, 2017, 02:08 AM ISTUpdated : Apr 11, 2018, 12:51 PM IST
ಹೊಟ್ಟೆ ತುಂಬಿಕೊಳ್ಳಲು ಬಡವರ ಬಡಿದಾಟ: ಇವರ ಅಸಹಾಯಕತೆಯೇ ಇವನ ಬಂಡವಾಳ

ಸಾರಾಂಶ

ಬಡವರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಹಣ ಪೀಕುವವರ ಅಸಲಿ ಆಟ ಈಗ ಬಯಲಾಗಿದೆ. ರಸ್ತೆ ಕಾಮಗಾರಿಗೆ ಕರಿಕಲ್ಲಿನ ಜಲ್ಲಿ ಕಲ್ಲು ಒಡೆಸಲು ಬಡವರನ್ನು ಬಳಸಿಕೊಂಡಿದ್ದಾನೆ. ಈ ಕೆಲಸದ ಮೇಲುಸ್ತುವಾರಿ ನೋಡಿಕೊಳ್ತಿರುವ ಈತನ ಹೆಸ್ರು ಪ್ರಭು ಅಂತ ಬೀದರ್​​ ಜಿಲ್ಲೆಯ ಮುಸ್ತಾಪೂರ ಗ್ರಾಮದ ಹೊರ ವಲಯದಲ್ಲಿ ಪ್ರಭು ಪ್ರಲಾಪ ಜೋರಾಗಿದ್ದು ಮಕ್ಕಳಿಗೆ 100 ರೂಪಾಯಿ ದೊಡ್ಡವರಿಗೆ 200 ರುಪಾಯಿ ಈತ ಕೂಲಿ ಕೊಡುತ್ತಾನಂತೆ.

ಬೀದರ್(ಫೆ.06): ಬಡವರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಹಣ ಪೀಕುವವರ ಅಸಲಿ ಆಟ ಈಗ ಬಯಲಾಗಿದೆ. ರಸ್ತೆ ಕಾಮಗಾರಿಗೆ ಕರಿಕಲ್ಲಿನ ಜಲ್ಲಿ ಕಲ್ಲು ಒಡೆಸಲು ಬಡವರನ್ನು ಬಳಸಿಕೊಂಡಿದ್ದಾನೆ. ಈ ಕೆಲಸದ ಮೇಲುಸ್ತುವಾರಿ ನೋಡಿಕೊಳ್ತಿರುವ ಈತನ ಹೆಸ್ರು ಪ್ರಭು ಅಂತ ಬೀದರ್​​ ಜಿಲ್ಲೆಯ ಮುಸ್ತಾಪೂರ ಗ್ರಾಮದ ಹೊರ ವಲಯದಲ್ಲಿ ಪ್ರಭು ಪ್ರಲಾಪ ಜೋರಾಗಿದ್ದು ಮಕ್ಕಳಿಗೆ 100 ರೂಪಾಯಿ ದೊಡ್ಡವರಿಗೆ 200 ರುಪಾಯಿ ಈತ ಕೂಲಿ ಕೊಡುತ್ತಾನಂತೆ.

ಇಲ್ಲಿ ಕ್ರಷರ್'​​ಗಳ ಸಂಖ್ಯೆ ಜಾಸ್ತಿ, ಆದರೆ ದುಬಾರಿ ಬೆಲೆ. ಹೀಗಾಗಿ ಕಡಿಮೆ ಬೆಲೆಗೆ ಸಿಗೋ ಕೂಲಿಗಳನ್ನು ಬಳಸಿಕೊಂಡು ಪ್ರಭು ರೀತಿಯ ಮನುಷ್ಯರು ಜೇಬು ತುಂಬಿಸಿಳ್ಳುತ್ತಿದ್ದಾರೆ. ದುರಂತ ಅಂದರೆ ಸುಮಾರು 50ಕ್ಕೂ ಹೆಚ್ಚು ಜನರಿರುವ ಈ ಕರಿಕಲ್ಲು ಗಣಿಗಾರಿಕೆಯಲ್ಲಿ 10ಕ್ಕೂ ಅಧಿಕ ಕಂದಮ್ಮಗಳು ಕೆಲಸ ಮಾಡುತ್ತಿದ್ದಾರೆ.

ಒಟ್ಟನಲ್ಲಿ ಕಲ್ಲು ಗಣಿಗಾರಿಕೆಯಲ್ಲಿ ಮಾನವ ಹಕ್ಕುಗಳ ನಿಯಮಗಳ ಉಲ್ಲಂಘನೆಯಾಗಿದೆ. ಮನುಷ್ಯರನ್ನು ಜೀತದಂತೆ ಬಳಸಿಕೊಳ್ಳಲಾಗುತ್ತಿದೆ. ಕುಬೇರರಾಗಲು ಅಡ್ಡದಾರಿ ಹಿಡಿದಿರುವ ಇಂತಹ ಖದೀಮರಿಗೆ ಬುದ್ಧಿ ಕಲಿಸಲು ಸಂಬಂಧಪಟ್ಟ ಇಲಾಖಾ ಸಿಬ್ಬಂದಿ ಮುಂದಾಗಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!