'ಧಣಿ'ಯನ್ನು ಕೊನೆಯ ಬಾರಿ ನೋಡಲು ಸಾಲು ನಿಂತ ಕಾಫಿನಾಡಿನ ಜನ, ಚಿಕ್ಕಮಗಳೂರು ಬಂದ್!

Published : Jul 31, 2019, 01:31 PM ISTUpdated : Jul 31, 2019, 02:10 PM IST
'ಧಣಿ'ಯನ್ನು ಕೊನೆಯ ಬಾರಿ ನೋಡಲು ಸಾಲು ನಿಂತ ಕಾಫಿನಾಡಿನ ಜನ, ಚಿಕ್ಕಮಗಳೂರು ಬಂದ್!

ಸಾರಾಂಶ

ಸ್ತಬ್ಧವಾಯ್ತು ಚಿಕ್ಕಮಗಳೂರು ನಗರ| ಸಿದ್ಧಾರ್ಥ್ ಗೌರವಾರ್ಥ್ ಇಡೀ ಚಿಕ್ಕಮಗಳೂರು ನಗರ ಬಂದ್| ಸ್ವಯಂಪ್ರೇರಿತವಾಗಿ ಅಂಗಡಿ- ಮುಂಗಟ್ಟು ಬಂದ್ ಮಾಡಿದ ವ್ಯಾಪಾರಿಗಳು| ಕೊಟ್ಟಿಗೆಹಾರದಿಂದ ಚಿಕ್ಕಮಗಳೂರುವರೆಗೆ ಸಾಲುಗಟ್ಟಿ ನಿಂತಿರುವ ಜನತೆ

ಚಿಕ್ಕಮಗಳೂರು[ಜು.31]: ಕಾಫಿನಾಡಿನ ಧಣಿ, ಹಲವರ ಬಾಳಿನ ಆಶಾಕಿರಣ..., ಸಾವಿರಾರು ನಿರುದ್ಯೋಗಿಗಳಿಗೆ ಕೆಲಸ ಕೊಟ್ಟು ಜೀವನ ಹಸನಾಗಿಸಿದ ಕರುಣಾಮಯಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮಾಲೀನಕನನ್ನು ಕಳೆದುಕೊಂಡ ಕಾಫಿ ಡೇ, ಸಿಬ್ಬಂದಿ ಅನಾಥರಾಗಿದ್ದಾರೆ. ನಾಪತ್ತೆಯಾಗಿ, ಶವವಾಗಿ ಮರಳಿ ಬರುತ್ತಿರುವ ತನ್ನೂರಿನ 'ಕಾಫಿ ಸಾಮ್ರಾಟ'ನನ್ನು ಕೊನೆಯ ಬಾರಿ ನೋಡಲು ಚಿಕ್ಕಮಗಳೂರಿನ ಜನ ರಸ್ತೆಯುದ್ಧಕ್ಕೂ ಸಾಲು ನಿಂತು ಕಾಯುತ್ತಿದ್ದಾರೆ.

ಹೌದು ಸೋಮವಾರ ನೇತ್ರಾವತಿ ತಟದಲ್ಲಿ ನಾಪತ್ತೆಯಾಗಿದ್ದ ಸಿದ್ಧಾರ್ಥ ಇಂದು ಬುಧವಾರ ಬೆಳಗ್ಗೆ ಹೊಯ್ಗೆ ಬಜಾರ್ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಈ ಮೂಲಕ ಅವರು ಮರಳಿ ಬರುತ್ತಾರೆಂದು ಆಸೆಯಿಟ್ಟುಕೊಂಡಿದ್ದವರಿಗೆ ತೀವ್ರ ನಿರಾಸೆಯಾಗಿದೆ. ಸದ್ಯ ತವರು ನಾಡು ಚಿಕ್ಕಮಗಳೂರಿಗೆ ಕರೆತರಲಾಗುತ್ತಿರುವ ಅವರ ಮೃತದೇಹವನ್ನು ನೋಡಲು ಕೊಟ್ಟಿಗೆಹಾರದಿಂದ ಚಿಕ್ಕಮಗಳೂರುವರೆಗೆ ಸಾಲುಗಟ್ಟಿ ನಿಂತು ಕಾಯುತ್ತಿದ್ದಾರೆ.

ನಾಪತ್ತೆಯಾದ ಕಾಫಿ ಡೇ ಒಡೆಯ ಮೃತದೇಹ ಪತ್ತೆ: ಸೋಮವಾರದಿಂದ ಏನೇನಾಯ್ತು?

ಅಂತರಾಷ್ಟ್ರೀಯ ಮಟ್ಟದಲ್ಲಿ ನಾಡಿನ ಕಾಫಿ ಕಂಪು ಹರಿಸಿದ್ದ ಸಿದ್ಧಾರ್ಥನನ್ನು ಕಳೆದುಕೊಂಡ ಚಿಕ್ಕಮಗಳೂರು ನಗರ ಸ್ಥಬ್ಧವಾಗಿದೆ. ಸಿದ್ಧಾರ್ಥ್ ಗೌರವಾರ್ಥ್ ಜನರು ಸ್ವಯಂಪ್ರೇರಿತವಾಗಿ ಅಂಗಡಿ- ಮುಂಗಟ್ಟು ಬಂದ್ ಮಾಡಿದ್ದಾರೆ. 'ಕಾಫಿ ರಾಜ'ನ ಸಾವಿನಿಂದ ತವರು ಜಿಲ್ಲೆಯ ಜನ ಆಘಾತಕ್ಕೊಳಗಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು