
ನೋಟು ಅಮಾನ್ಯದ ಬಗ್ಗೆ ಈಗಾಗಲೇ ಸಾಕಷ್ಟು ಪರ-ವಿರೋದ ಚರ್ಚೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಈ ಬಗ್ಗೆ ಖ್ಯಾತ ಲೇಖಕ ಚೇತನ್ ಭಗತ್ ಒಂದಷ್ಟು ಮಾಹಿತಿಗಳನ್ನು ಕಲೆಹಾಕುವ ಸಲುವಾಗಿ ಟ್ವಿಟ್ಟರ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕುರಿತು ಆನ್'ಲೈನ್ ಸಮೀಕ್ಷೆ ನಡೆಸಿದ್ದಾರೆ. ಅದರಿಂದ ಬಂದ ಉತ್ತರ ನಿಜಕ್ಕೂ ಆಘಾತಕಾರಿಯಾಗಿದೆ.
ಅದರ ಸಾರಾಂಶ ಇಂತಿದೆ:
ಒಂದುವೇಳೆ ನಿಮ್ಮ ನಾಯಕ ಮೋದಿ ಕಡಿಮೆ ಪ್ರಜಾಪ್ರಭುತ್ವದ ಅವಕಾಶವನ್ನು ಕೊಟ್ಟರೂ ಪರವಾಗಿಲ್ಲವೇ? ಎಂಬ ಪ್ರಶ್ನೆಗೆ ಟ್ವಿಟ್ಟರ್'ನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯಿಸಿದ್ದು ಶೇ.55% ಮಂದಿ ಮೋದಿಯೇ ನಮ್ಮ ನಾಯಕ ಎಂದಿದ್ದಾರೆ.
ಇನ್ನು, ಒಂದು ವೇಳೆ ಸಂಪೂರ್ಣ ಭ್ರಷ್ಟಾಚಾರ ತೊಡೆದು ಹಾಕುತ್ತೇನೆ, ಭ್ರಷ್ಟರನ್ನು ಶಿಕ್ಷಿಸುತ್ತೇನೆ ಹಾಗಾಗಿ ತುರ್ತು ಪರಿಸ್ಥಿತಿ ಘೋಷಿಸುತ್ತೇನೆ ಎಂದರೆ ಅದಕ್ಕೂ ನೀವು ಬೆಂಬಲಿಸುತ್ತೀರಾ? ಎಂಬ ಪ್ರಶ್ನೆಗೆ ಸುಮಾರು 9 ಸಾವಿರ ಮಂದಿ ಪ್ರತಿಕ್ರಿಯಿಸಿದ್ದು ಶೇ.57% ಜನ ಹೌದು ನಾವು ಬೆಂಬಲಿಸುತ್ತೇವೆ ಎಂದಿದ್ದಾರೆ.
ಚೇತನ್ ಭಗತ್ ಟ್ವಿಟರ್'ನಲ್ಲಿ ನಡೆಸಿರುವ ಸಮೀಕ್ಷೆ, ಅವರ ಅಂತಿಮವಾಗಿ ಅಭಿಪ್ರಾಯ ನಿಮಗಾಗಿ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.